ಸಿಧು ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ರಜಿಯಾ ಸುಲ್ತಾನಾ ಮತ್ತು ಪರ್ಗತ್ ಸಿಂಗ್ ಅವರು ರಾಜೀನಾಮೆ ಕೊಟ್ಟಿದ್ದಾರೆ. ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಅವರೂ ಸ್ಥಾನತೊರೆದಿದ್ದಾರೆ. ಈ ನಡುವೆ, ಅಮರಿಂದರ್ ಅವರು ಬಿಜೆಪಿ ಮುಖಂಡರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ ಎಂಬ ವದಂತಿಯೂ ಕೇಳಿ ಬಂದಿತ್ತು. ಆದರೆ, ಅದನ್ನು ಅಮರಿಂದರ್ ಆಪ್ತರು ಅಲ್ಲಗಳೆದಿದ್ದಾರೆ.