ರಾಜಸ್ಥಾನದಲ್ಲಿ ಶಿಕ್ಷಕನೊಬ್ಬನ ಥಳಿತಕ್ಕೆ ಒಳಗಾಗಿ ದಲಿತ ಶಾಲಾ ಬಾಲಕನೊಬ್ಬ ಸಾವನ್ನಪ್ಪಿದ ಘಟನೆಯ ಕೋಲಾಹಲದ ಬೆನ್ನಲ್ಲಿಯೇ ಈ ಹೇಳಿಕೆ ನೀಡಿರುವ ಮೀರಾ ಅವರು, ‘ಜಾತಿಯ ಆಧಾರದ ದೌರ್ಜನ್ಯಗಳಿಗೆ ಜವಾಬ್ದಾರಿಯಾಗಿರುವ ನಿರ್ದಿಷ್ಟ ಆಡಳಿತ ಅಥವಾ ರಾಜಕೀಯ ಪಕ್ಷಕ್ಕೆಯಾರೂ ಸೇರಬಾರದು. ಏಕೆಂದರೆ ಈ ಪ್ರಕ್ರಿಯೆಯು, ಜಾತಿಯನ್ನು ನಿರ್ಮೂಲನೆ ಮಾಡಬೇಕು ಎಂಬ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಹಲವು ವರ್ಷಗಳಿಂದಲೂ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲಾಗಿಲ್ಲ’ ಎಂದು ಹೇಳಿದರು.