ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕಾ ಸಚಿವ ತಂಗಂ ತೆನ್ನರಸು, ‘ನೀಟ್ ವ್ಯಾಪ್ತಿಯಿಂದ ತಮಿಳುನಾಡನ್ನು ಹೊರಗಿಡಬೇಕು ಎಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿ, ರಾಜ್ಯಪಾಲರಿಗೆ ಎರಡನೇ ಸಲ ಕಳುಹಿಸಲಾಗಿದೆ. ಇದಕ್ಕೆ ಅವರು ಇನ್ನೂ ಅಂಕಿತ ಹಾಕಿಲ್ಲ. ಇಂಥ ಸಮಯದಲ್ಲಿ ನಾವು ತಮಿಳು ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ, ಅದು ರಾಜ್ಯದ ಜನರ ಭಾವನೆಗಳಿಗೆ ಧಕ್ಕೆ ತರಲಿದೆ’ ಎಂದರು.