ಆರೋಗ್ಯ ಸಮಸ್ಯೆಗಳು ತಲೆದೋರುವುದನ್ನು ಹೆಚ್ಚಿನ ಸಮಯಕ್ಕೆ ಮುಂದೂಡಲು ಸಾಧ್ಯವಿಲ್ಲ. ಮಾಲಿನ್ಯರಹಿತ ಪರಿಸರವನ್ನು ಒದಗಿಸುವುದು ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳ ಸಾಂವಿಧಾನಿಕ ಕರ್ತವ್ಯವಾಗಿದೆ. ಅಲ್ಲದೇ ಇದು ಜೀವಿಸುವ ಹಕ್ಕಿನ ಭಾಗವಾಗದ್ದು, ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಹಾಗಾಗಿ, ಸ್ವಚ್ಛ ಪರಿಸರ ಒದಗಿಸುವುದು ಸರ್ಕಾರದ ಹೊಣೆಗಾರಿಕೆ. ಹಣಕಾಸಿನ ಕೊರತೆಯ ನೆಪವನ್ನು ಈ ವಿಚಾರದಲ್ಲಿ ನೀಡಲಾಗುವುದಿಲ್ಲ ಎಂದು ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಎ.ಕೆ. ಗೋಯಲ್ ಅವರಿದ್ದ ಪೀಠ ಹೇಳಿದೆ.