ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೇನಿಯಂ ಜಪ್ತಿ ಪ್ರಕರಣ: ಎನ್‌ಐಎಗೆ ತನಿಖೆ ಹೊಣೆ

Last Updated 9 ಮೇ 2021, 12:01 IST
ಅಕ್ಷರ ಗಾತ್ರ

ನವದೆಹಲಿ: ‘ಮುಂಬೈನಲ್ಲಿ ಈಚೆಗೆ ಜಪ್ತಿ ಮಾಡಿದ್ದ ₹ 21 ಕೋಟಿ ಮೌಲ್ಯದ ಪ್ರಾಕೃತಿಕ ಯುರೇನಿಯಂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿದೆ’ ಎಂದು ಅದರ ವಕ್ತಾರರು ಭಾನುವಾರ ತಿಳಿಸಿದರು.

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ಘಟಕ (ಎಟಿಎಸ್‌) ಅಧಿಕಾರಿಗಳು ಮೇ 5ರ ರಾತ್ರಿ ಜಿಗರ್‌ ಜಯೇಶ್‌ ಪಾಂಡ್ಯ ಮತ್ತು ಅಬು ತಾಹಿರ್‌ ಅಫ್ಜಲ್‌ ಚೌಧರಿ ಅವರನ್ನು ಬಂಧಿಸಿ, ₹ 21 ಕೋಟಿ ಮೌಲ್ಯದ 7.1 ಕೆ.ಜಿ ಯುರೇನಿಯಂ ಜಪ್ತಿ ಮಾಡಿದ್ದರು.

ಎನ್ಐಎ ವಕ್ತಾರರ ಪ್ರಕಾರ, ಈ ಮೊದಲು ಎಟಿ‌ಎಸ್‌ ಕಾಲಾಚೌಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಕೇಂದ್ರ ಗೃಹ ಸಚಿವಾಲಯದ ಆದೇಶದ ಅನುಸಾರ ಎನ್‌ಐಎ ಈ ಬಗ್ಗೆ ಹೊಸದಾಗಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT