‘ಸಂಬಂಧಿಸಿದ ಎಲ್ಲ ಜನರೊಂದಿಗೆ ಮಾತನಾಡಿದ ಬಳಿಕ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಲಿದೆ.ಎನ್ಟಿಎ ಭದ್ರತೆ, ಶಿಷ್ಟಾಚಾರಗಳು, ನಿಷೇಧಿತ ವಸ್ತುಗಳು, ವಸ್ತ್ರ ಸಂಹಿತೆ ಹಾಗೂ ನಗರ ಸಂಯೋಜಕರು, ಕೇಂದ್ರದ ಅಧೀಕ್ಷಕರು, ವೀಕ್ಷಕರು ಮಾರ್ಗಸೂಚಿ ಅನುಸರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ. ಸಮಿತಿಯು ಅಗತ್ಯ ಶಿಫಾರಸುಗಳನ್ನು ಮಾಡಲಿದೆ’ ಎಂದು ಎನ್ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.