ಆಗ ಅವರು,‘ರಾಜ್ಯಸಭೆಗೆ ಹೋಗಬೇಕು ಎಂದು ನನಗೆ ಅನ್ನಿಸಿದಾಗ ಮತ್ತು ನಾನು ಮಾತನಾಡಬಹುದಾದ ಮಹತ್ವದ ವಿಚಾರಗಳು ಇವೆ ಅನ್ನಿಸಿದಾಗ, ನಾನು ಹೋಗುತ್ತೇನೆ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ಸಚೇತಕರ ಉಸ್ತುವಾರಿಯಲ್ಲಿಲ್ಲ. ಕರೆ ಬಂದಾಗಲೆಲ್ಲಾ ಅವರು ಹಾಜರಾಗಬೇಕು. ಆದರೆ ಅದು ನನಗೆ ಅನ್ವಯವಾಗುವುದಿಲ್ಲ. ರಾಜ್ಯಸಭೆಗೆ ಹೋಗುವುದೂ ನನ್ನ ಆಯ್ಕೆ, ಹೊರಗೆ ಬರುವುದೂ ನನ್ನದೇ ಆಯ್ಕೆ. ನಾನು ಸದನದ ಸ್ವತಂತ್ರ ಸದಸ್ಯ’ ಎಂದು ಅವರು ಹೇಳಿದ್ದರು.