<p><strong>ನವದೆಹಲಿ:</strong> ‘ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದಿಂದಾಗಿ 15 ದಿನಗಳಲ್ಲಿ1,200ಕ್ಕೂ ಅಧಿಕ ಪಕ್ಷಿಗಳು ಸತ್ತಿರುವುದು ವರದಿಯಾಗಿದೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p>.<p>‘ವಿವಿಧ ಪ್ರದೇಶಗಳಲ್ಲಿ ಸತ್ತಿದ್ದ ಹಕ್ಕಿಗಳ ಪೈಕಿ 201 ಪಕ್ಷಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ24 ಪಕ್ಷಿಗಳಿಗೆ ಹಕ್ಕಿ ಜ್ವರ ತಗುಲಿರುವುದು ದೃಢಪಟ್ಟಿದೆ’ ಎಂದು ದೆಹಲಿಯ ಅಭಿವೃದ್ಧಿ ಇಲಾಖೆಯ (ಡಿಡಿಡಿ) ಪಶುಸಂಗೋಪನಾ ಘಟಕದ ನಿರ್ದೇಶಕ ರಾಕೇಶ್ ಸಿಂಗ್ ಹೇಳಿದ್ದಾರೆ.</p>.<p>‘ಜನವರಿ 6ರಿಂದ ಇದುವರೆಗೂ ದೆಹಲಿಯಲ್ಲಿ ಒಟ್ಟು1,216 ಹಕ್ಕಿಗಳು ಸತ್ತಿರುವುದು ವರದಿಯಾಗಿದೆ. ಇದಕ್ಕೆ ಹಕ್ಕಿ ಜ್ವರಕ್ಕಿಂತಲೂ ಶೀತ ವಾತಾವರಣವೇ ಮುಖ್ಯ ಕಾರಣ’ ಎಂದು ಅವರು ತಿಳಿಸಿದ್ದಾರೆ.</p>.<p>ಕೆಂಪು ಕೋಟೆ ಸುತ್ತಮುತ್ತ ಒಟ್ಟು15 ಕಾಗೆಗಳು ಸತ್ತಿದ್ದವು. ಈ ಪೈಕಿ ಒಂದು ಕಾಗೆಯ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಸ್ಥಳಿಯಾಡಳಿತವು ಇದೇ26ರವರೆಗೂ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವ ತೀರ್ಮಾನ ಕೈಗೊಂಡಿತ್ತು.</p>.<p>‘ಕೆಲ ದಿನಗಳ ಹಿಂದೆ ದೆಹಲಿಯ ಮೃಗಾಲಯದಲ್ಲಿ ನಾಲ್ಕು ಕೊಕ್ಕರೆಗಳು ಮೃತಪಟ್ಟಿದ್ದವು. ಸೋಮವಾರ 12 ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (ನಿಹಸಾದ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಸಿಂಗ್ ನುಡಿದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದಿಂದಾಗಿ 15 ದಿನಗಳಲ್ಲಿ1,200ಕ್ಕೂ ಅಧಿಕ ಪಕ್ಷಿಗಳು ಸತ್ತಿರುವುದು ವರದಿಯಾಗಿದೆ’ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p>.<p>‘ವಿವಿಧ ಪ್ರದೇಶಗಳಲ್ಲಿ ಸತ್ತಿದ್ದ ಹಕ್ಕಿಗಳ ಪೈಕಿ 201 ಪಕ್ಷಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪೈಕಿ24 ಪಕ್ಷಿಗಳಿಗೆ ಹಕ್ಕಿ ಜ್ವರ ತಗುಲಿರುವುದು ದೃಢಪಟ್ಟಿದೆ’ ಎಂದು ದೆಹಲಿಯ ಅಭಿವೃದ್ಧಿ ಇಲಾಖೆಯ (ಡಿಡಿಡಿ) ಪಶುಸಂಗೋಪನಾ ಘಟಕದ ನಿರ್ದೇಶಕ ರಾಕೇಶ್ ಸಿಂಗ್ ಹೇಳಿದ್ದಾರೆ.</p>.<p>‘ಜನವರಿ 6ರಿಂದ ಇದುವರೆಗೂ ದೆಹಲಿಯಲ್ಲಿ ಒಟ್ಟು1,216 ಹಕ್ಕಿಗಳು ಸತ್ತಿರುವುದು ವರದಿಯಾಗಿದೆ. ಇದಕ್ಕೆ ಹಕ್ಕಿ ಜ್ವರಕ್ಕಿಂತಲೂ ಶೀತ ವಾತಾವರಣವೇ ಮುಖ್ಯ ಕಾರಣ’ ಎಂದು ಅವರು ತಿಳಿಸಿದ್ದಾರೆ.</p>.<p>ಕೆಂಪು ಕೋಟೆ ಸುತ್ತಮುತ್ತ ಒಟ್ಟು15 ಕಾಗೆಗಳು ಸತ್ತಿದ್ದವು. ಈ ಪೈಕಿ ಒಂದು ಕಾಗೆಯ ಮಾದರಿಯಲ್ಲಿ ಹಕ್ಕಿ ಜ್ವರದ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಸ್ಥಳಿಯಾಡಳಿತವು ಇದೇ26ರವರೆಗೂ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸುವ ತೀರ್ಮಾನ ಕೈಗೊಂಡಿತ್ತು.</p>.<p>‘ಕೆಲ ದಿನಗಳ ಹಿಂದೆ ದೆಹಲಿಯ ಮೃಗಾಲಯದಲ್ಲಿ ನಾಲ್ಕು ಕೊಕ್ಕರೆಗಳು ಮೃತಪಟ್ಟಿದ್ದವು. ಸೋಮವಾರ 12 ಮಾದರಿಗಳನ್ನು ಸಂಗ್ರಹಿಸಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸಸ್ (ನಿಹಸಾದ್) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಸಿಂಗ್ ನುಡಿದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>