‘ಯೋಗವನ್ನು ದಿನಚರಿಯ ಭಾಗವಾಗಿ ಮಾಡುವ ನಮ್ಮ ಉಪಕ್ರಮವನ್ನು ಜನರು ಹೃತ್ಪೂರ್ವಕವಾಗಿ ಸ್ವೀಕರಿಸಿರುವುದು ಕೋವಿಡ್ ರೋಗಿಗಳ ಮೇಲಿನ ಅಧ್ಯಯನದಿಂದ ತಿಳಿದುಬಂದಿದೆ. ಕೋವಿಡ್ ಸಂದರ್ಭದಲ್ಲಿ ಸೋಂಕಿತರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ನೆರವಿನ ಅಗತ್ಯವಿದೆ. ಹೆಚ್ಚಿನ ರೋಗಿಗಳು ಏಕಾಂಗಿತನ ಮತ್ತು ಪ್ರತ್ಯೇಕವಾಸದಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಮ್ಮ ಯೋಗ ತರಬೇತುದಾರರು ಅವರ (ಸೋಂಕಿತರ) ಜತೆಗಿರುತ್ತಾರೆ’ ಎಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.