ನವದೆಹಲಿ: ಪದ್ಮ ಭೂಷಣ ಪಂಡಿತ್ ರಾಜನ್ ಮಿಶ್ರಾ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನವದೆಹಲಿಯ ಸಂತ ಸ್ಟೀಫನ್ಸ್ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದರು ಎಂದು ಮಿಶ್ರಾ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಪಂ. ಮಿಶ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಪಂ.ರಾಜನ್–ಸಾಜನ್ ಮಿಶ್ರಾ ಸಹೋದರರು ಬನಾರಸ್ ಘರಾಣೆಯ ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದರು. ಪ್ರತಿ ಸಂಗೀತ ಕಛೇರಿಯನ್ನೂ ಆರಂಭಿಸುವ ಮುನ್ನ ‘ಮ್ಯೂಸಿಕ್ ಈಸ್ ವರ್ಶಿಪ್ ಫಾರ್ ಅಸ್’ (ಸಂಗೀತವೇ ನಮಗೆ ಪೂಜೆ) ಎಂದು ಹೇಳಿಯೇ ಕಛೇರಿ ಆರಂಭಿಸುವುದು ಅವರ ವಿಶೇಷತೆಯಾಗಿತ್ತು.
शास्त्रीय गायन की दुनिया में अपनी अमिट छाप छोड़ने वाले पंडित राजन मिश्र जी के निधन से अत्यंत दुख पहुंचा है। बनारस घराने से जुड़े मिश्र जी का जाना कला और संगीत जगत के लिए एक अपूरणीय क्षति है। शोक की इस घड़ी में मेरी संवेदनाएं उनके परिजनों और प्रशंसकों के साथ हैं। ओम शांति!