ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಕುರಿತು ಮಾತನಾಡಿದ ರಾಜು ಅವರು, ‘ಚುನಾವಣೆ ಶಾಂತಿಯುತವಾಗಿ ನಡೆದಿರುವುದು ತುಂಬಾ ಸಂತೋಷದ ವಿಷಯ. ಕಣಿವೆ ರಾಜ್ಯದ ಜನರು ಅಭಿವೃದ್ಧಿ ಬಯಸುವ ಜತೆಗೆ, ಪ್ರಜಾಪ್ರಭುತ್ವವನ್ನು ಉತ್ತೇಜಿಸಲು ಮತ ಚಲಾಯಿಸಿದ್ದಾರೆ‘ ಎಂದು ಹೇಳಿದರು.