<p><strong>ನವದೆಹಲಿ:</strong> ಬೆಂಗಳೂರಿನ ಸ್ಟೋರಿ ಟೆಲ್ಲಿಂಗ್ ಸೊಸೈಟಿ ಹಾಗೂ ಇಂಥ ಇತರ ಕೆಲವು ಸಂಸ್ಥೆಗಳ ಕಾರ್ಯಕ್ರಮಗಳ ಬಗ್ಗೆ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.</p>.<p>ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಸದಸ್ಯರ ಜತೆಗೆ ಸಂವಾದವನ್ನೂ ಅವರು ನಡೆಸಿದರು.</p>.<p>ಸಾಫ್ಟ್ವೇರ್ ಉದ್ಯೋಗಿಯಾಗಿ, ಈಗ ಕತೆ ಹೇಳುವ ಕಾಯಕದಲ್ಲಿ ತೊಡಗಿರುವ ಸೊಸೈಟಿಯ ಸಂಸ್ಥಾಪಕಿ ಅಪರ್ಣಾ ಅತ್ರೇಯ, ಇತರ ಸದಸ್ಯರಾದ ಶೈಲಜಾ ಸಂಪತ್, ಸ್ವಾಮಿ ಶ್ರೀನಿವಾಸ, ಲಾವಣ್ಯಾ ಪ್ರಸಾದ್ ಹಾಗೂ ಅಪರ್ಣಾ ಜೈಶಂಕರ್ ಅವರ ಜತೆ ಪ್ರಧಾನಿ ಸಂವಾದ ನಡೆಸಿದರು.</p>.<p>ಕಥೆ ಹೇಳುವ ಕಲೆಯನ್ನು ಪುನರುಜ್ಜೀವನಗೊಳಿಸಿ, ಪೋಷಿಸಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2013ರಲ್ಲಿ ‘ಸ್ಟೋರಿ ಟೆಲ್ಲಿಂಗ್ ಸೊಸೈಟಿ’ಯನ್ನು ಆರಂಭಿಸಲಾಗಿತ್ತು. ಕಥೆ ಹೇಳುವ ಕಲೆಗೆ ಸಂಬಂಧಿಸಿದ ಹಲವು ಕಾರ್ಯಾಗಾರಗಳು, ಉತ್ಸವಗಳನ್ನು ಈ ಸಂಸ್ಥೆಯು ಆಯೋಜಿಸುತ್ತಾ ಬಂದಿದೆ. ಇದೇ ಉದ್ದೇಶದ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳ ಜತೆಗೆ ಈ ಸೊಸೈಟಿಯು ಸಂಪರ್ಕ ಹೊಂದಿದ್ದು, ಸಾಂಸ್ಕೃತಿಕ ಆದಾನ ಪ್ರದಾನವನ್ನು ನಡೆಸುತ್ತಿದೆ.</p>.<p>ಬೆಂಗಳೂರು ನಿವಾಸಿ, ಐಐಎಂ ಅಹಮದಾಬಾದ್ನ ಹಳೆವಿದ್ಯಾರ್ಥಿ, ಅಮರ್ ವ್ಯಾಸ್ ಅವರು ಆರಂಭಿಸಿದ ‘ಗಾಥಾಸ್ಟೋರಿ.ಇನ್’ ಸಂಸ್ಥೆಯನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ‘ವ್ಯಾಸ್ ಅವರು ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರೂ ಭಾರತಕ್ಕೆ ಮರಳಿ ಈ ವೆಬ್ಸೈಟ್ ಆರಂಭಿಸಿದ್ದಾರೆ’ ಎಂದು ಮೋದಿ ಹೇಳಿದರು.</p>.<p>ಮಹಾತ್ಮಾ ಗಾಂಧಿ ಕುರಿತ ಕತೆಗಳನ್ನು ಹೇಳುವಲ್ಲಿ ವಿಶೇಷ ಉತ್ಸಾಹ ತೋರುತ್ತಿರುವ ಬೆಂಗಳೂರಿನ ವಿಕ್ರಂ ಶ್ರೀಧರ್ ಅವರ ಹೆಸರನ್ನೂ ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬೆಂಗಳೂರಿನ ಸ್ಟೋರಿ ಟೆಲ್ಲಿಂಗ್ ಸೊಸೈಟಿ ಹಾಗೂ ಇಂಥ ಇತರ ಕೆಲವು ಸಂಸ್ಥೆಗಳ ಕಾರ್ಯಕ್ರಮಗಳ ಬಗ್ಗೆ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾನುವಾರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.</p>.<p>ಸ್ಟೋರಿ ಟೆಲ್ಲಿಂಗ್ ಸೊಸೈಟಿಯ ಸದಸ್ಯರ ಜತೆಗೆ ಸಂವಾದವನ್ನೂ ಅವರು ನಡೆಸಿದರು.</p>.<p>ಸಾಫ್ಟ್ವೇರ್ ಉದ್ಯೋಗಿಯಾಗಿ, ಈಗ ಕತೆ ಹೇಳುವ ಕಾಯಕದಲ್ಲಿ ತೊಡಗಿರುವ ಸೊಸೈಟಿಯ ಸಂಸ್ಥಾಪಕಿ ಅಪರ್ಣಾ ಅತ್ರೇಯ, ಇತರ ಸದಸ್ಯರಾದ ಶೈಲಜಾ ಸಂಪತ್, ಸ್ವಾಮಿ ಶ್ರೀನಿವಾಸ, ಲಾವಣ್ಯಾ ಪ್ರಸಾದ್ ಹಾಗೂ ಅಪರ್ಣಾ ಜೈಶಂಕರ್ ಅವರ ಜತೆ ಪ್ರಧಾನಿ ಸಂವಾದ ನಡೆಸಿದರು.</p>.<p>ಕಥೆ ಹೇಳುವ ಕಲೆಯನ್ನು ಪುನರುಜ್ಜೀವನಗೊಳಿಸಿ, ಪೋಷಿಸಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2013ರಲ್ಲಿ ‘ಸ್ಟೋರಿ ಟೆಲ್ಲಿಂಗ್ ಸೊಸೈಟಿ’ಯನ್ನು ಆರಂಭಿಸಲಾಗಿತ್ತು. ಕಥೆ ಹೇಳುವ ಕಲೆಗೆ ಸಂಬಂಧಿಸಿದ ಹಲವು ಕಾರ್ಯಾಗಾರಗಳು, ಉತ್ಸವಗಳನ್ನು ಈ ಸಂಸ್ಥೆಯು ಆಯೋಜಿಸುತ್ತಾ ಬಂದಿದೆ. ಇದೇ ಉದ್ದೇಶದ ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳ ಜತೆಗೆ ಈ ಸೊಸೈಟಿಯು ಸಂಪರ್ಕ ಹೊಂದಿದ್ದು, ಸಾಂಸ್ಕೃತಿಕ ಆದಾನ ಪ್ರದಾನವನ್ನು ನಡೆಸುತ್ತಿದೆ.</p>.<p>ಬೆಂಗಳೂರು ನಿವಾಸಿ, ಐಐಎಂ ಅಹಮದಾಬಾದ್ನ ಹಳೆವಿದ್ಯಾರ್ಥಿ, ಅಮರ್ ವ್ಯಾಸ್ ಅವರು ಆರಂಭಿಸಿದ ‘ಗಾಥಾಸ್ಟೋರಿ.ಇನ್’ ಸಂಸ್ಥೆಯನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ‘ವ್ಯಾಸ್ ಅವರು ಕೆಲವು ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿದ್ದರೂ ಭಾರತಕ್ಕೆ ಮರಳಿ ಈ ವೆಬ್ಸೈಟ್ ಆರಂಭಿಸಿದ್ದಾರೆ’ ಎಂದು ಮೋದಿ ಹೇಳಿದರು.</p>.<p>ಮಹಾತ್ಮಾ ಗಾಂಧಿ ಕುರಿತ ಕತೆಗಳನ್ನು ಹೇಳುವಲ್ಲಿ ವಿಶೇಷ ಉತ್ಸಾಹ ತೋರುತ್ತಿರುವ ಬೆಂಗಳೂರಿನ ವಿಕ್ರಂ ಶ್ರೀಧರ್ ಅವರ ಹೆಸರನ್ನೂ ಮೋದಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>