ಟರ್ಕಿಯಿಂದ ಹಿಂತಿರುಗಿದ ತಂಡಗಳ ಸಿಬ್ಬಂದಿಯನ್ನು ಉದ್ದೇಶಿಸಿದ ಮಾತನಾಡಿದ ಅವರು, ‘ಕೆಲವೇ ವರ್ಷಗಳಲ್ಲಿ ಭಾರತವು ಸ್ವಾವಲಂಬಿ ದೇಶವಾಗಿ ತನ್ನ ಗುರುತನ್ನು ಸಾಬೀತುಪಡಿಸಿದ್ದು, ನಿಸ್ವಾರ್ಥವಾಗಿ ಇತರ ದೇಶಗಳಿಗೆ ಸಹಾಯ ಹಸ್ತ ಚಾಚುವಂತಾಗಿದೆ. ಭೂಕಂಪಪೀಡಿತ ಪ್ರದೇಶಗಳಲ್ಲಿ ನಮ್ಮ ದೇಶದ ತಂಡವು ಮಾನವೀಯತೆಯಿಂದ ಸೇವೆ ಮಾಡಿದ್ದು, ಇದರಿಂದ ಇಡೀ ದೇಶವೇ ಹೆಮ್ಮೆಪಡುವಂತಾಗಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.