ನವದೆಹಲಿ: ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂಬ ವದಂತಿ ಹರಡಬಹುದು. ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಇಂತಹ ವದಂತಿಗಳನ್ನು ತಡೆಯಬೇಕು ಎಂದು ಪ್ರಧಾನಿ ಹೇಳಿದ್ದಾರೆ.
‘ಕೋವಿಡ್ ಲಸಿಕೆಯುಜನವರಿ ಬಳಿಕ ಯಾವಾಗ ಬೇಕಿದ್ದರೂ ದೊರೆಯಬಹುದು. ಹಾಗಾಗಿ, ಲಸಿಕೆ ವಿತರಣೆಗೆ ಸಜ್ಜಾಗಿ ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಪ್ರಧಾನಿ ಜತೆಗಿನ ವಿಡಿಯೊ ಸಂವಾದದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.