<p><strong>ಹೈದರಾಬಾದ್</strong>: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಎಸ್ಆರ್ಪಿ ವಿಶಾಖಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಭವ್ಯ ಸ್ವಾಗತ ಕೋರಿತ್ತು. ಅಪರಾಹ್ನ ತೆಲಂಗಾಣಕ್ಕೆ ಬಂದ ಮೋದಿ ಅವರನ್ನು ‘ತೆಲಂಗಾಣಕ್ಕೆ ಪ್ರವೇಶವಿಲ್ಲ’ ಎಂಬ ಬ್ಯಾನರ್ಗಳು ಎದುರಾದವು. ಹೈದರಾಬಾದ್ನಲ್ಲಿ ಬಿಆರ್ಎಸ್ (ಈ ಹಿಂದಿನ ಟಿಆರ್ಎಸ್) ಮೋದಿ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.</p>.<p>ತೆಲುಗು ಭಾಷಿಕ ಎರಡು ರಾಜ್ಯಗಳಲ್ಲಿ ದೊರೆತ ಭಿನ್ನ ಪ್ರತಿಕ್ರಿಯೆಗಳು ರಾಜಕೀಯ ಸಮೀಕರಣವನ್ನು ಬಿಂಬಿಸುತ್ತಿವೆ. ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮೋದಿ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂಬುದನ್ನೂ ಹೇಳುತ್ತಿವೆ.</p>.<p>ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಹಾಡಿ ಹೊಗಳಿದರು. ದಯಾಪರ, ಉದಾರಿ ಮುಂತಾದ ಪದಗಳಿಂದ ಬಣ್ಣಿಸಿದರು. ರಾಜ್ಯಕ್ಕೆ ಇನ್ನಷ್ಟು ಯೋಜನೆಗಳು ಮತ್ತು ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿದರು.</p>.<p>ಮೋದಿ ಅವರನ್ನು ದೆಹಲಿಯಲ್ಲಿ ಆಗಾಗ ಭೇಟಿಯಾಗುತ್ತಿರುವ ಜಗನ್ ಅವರು, ಮೋದಿ ಜೊತೆಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ್ದು ಎಂದರು.</p>.<p>ಶುಕ್ರವಾರ ಸಂಜೆ ಬಂದ ಮೋದಿ ಅವರನ್ನು ಜಗನ್ ಅವರು ವಿಮಾನ ನಿಲ್ದಾಣದಲ್ಲಿಯೇ ಬರಮಾಡಿಕೊಂಡಿದ್ದರು. ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವೈಎಸ್ಆರ್ಪಿ ಆಯೋಜಿಸಿದೆ. ವೈಎಸ್ಆರ್ಪಿ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರೇ ಉಸ್ತುವಾರಿ ನೋಡಿಕೊಂಡಿದ್ದರು.</p>.<p>ಆದರೆ, ಹೈದರಾಬಾದ್ನಲ್ಲಿ ಎಂದಿನಂತೆ ತಿರಸ್ಕಾರವೇ ಮೋದಿ ಅವರನ್ನು ಎದುರುಗೊಂಡಿತ್ತು. ಪ್ರಧಾನಿಯನ್ನು ಬರಮಾಡಿಕೊಳ್ಳಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಹೋಗಲಿಲ್ಲ. ಬದಲಿಗೆ, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಅವರನ್ನು ಕಳುಹಿಸಿದ್ದರು. ಪ್ರಧಾನಿಯನ್ನು ಬರಮಾಡಿಕೊಳ್ಳಲು ಕೆಸಿಆರ್ ಹೋಗದೇ ಇರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.</p>.<p>‘ಬೈ ಬೈ ಮೋದಿ’ ಎಂಬ ಫ್ಲೆಕ್ಸ್ಗಳೂ ಹೈದರಾಬಾದ್ನ ಬೀದಿಗಳಲ್ಲಿ ಕಾಣಿಸಿವೆ. ‘ನನಗೆ 50 ದಿನಗಳನ್ನು ಕೊಡಿ. ನಾನು ಹೇಳಿದ್ದು ತಪ್ಪಾದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು 2016ರ ನವೆಂಬರ್ನಲ್ಲಿ ಮೋದಿ ಹೇಳಿದ್ದನ್ನು ನೆನಪಿಸುವ ಫ್ಲೆಕ್ಸ್ಗಳೂ ಇದ್ದವು.</p>.<p>‘ಈಗ 2,195 ದಿನಗಳಾಗಿವೆ. ಹಾಗಿದ್ದರೂ ಯಾವ ಸುಧಾರಣೆಯೂ ಆಗಿಲ್ಲ ಮೋದಿಯವರೇ’ ಎಂದು ಒಂದು ಬ್ಯಾನರ್ನಲ್ಲಿ ಬರೆಯಲಾಗಿದೆ. ಮೋದಿ, ಅಮಾನ್ಯ ಮಾಡಲಾದ ₹1,000 ಮುಖಬೆಲೆಯ ನೋಟು, ಪೆಟ್ರೋಲ್ ಕ್ಯಾನ್ ಮತ್ತು ಉರಿಯುತ್ತಿರುವ ಬೆಂಕಿ ಕಡ್ಡಿಯ ಚಿತ್ರವೂ ಈ ಬ್ಯಾನರ್ನಲ್ಲಿ ಇದೆ.</p>.<p>‘ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ತೆಲಂಗಾಣಕ್ಕೆ ಬಂದ ಪ್ರಧಾನಿಯನ್ನು ಈ ರೀತಿ ಹೀಯಾಳಿಸಿದ್ದರ ಹಿಂದೆ ಕೆಸಿಆರ್ ಅವರ ಕೈವಾಡ ಇದೆ’ ಎಂದು ತೆಲಂಗಾಣ ಬಿಜೆಪಿ ಆರೋಪಿಸಿದೆ.</p>.<p>ಬೇಗಂಪೇಟೆಯಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು ‘ಸಾರ್ವಜನಿಕರಿಗೆ ಕೊಡಲು ಏನೂ ಇಲ್ಲದವರು ನನ್ನನ್ನು ಮೂದಲಿಸುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಬೇಗದಲ್ಲಿಯೇ ಕಮಲ ಅರಳಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈಎಸ್ಆರ್ಪಿ ವಿಶಾಖಪಟ್ಟಣದಲ್ಲಿ ಶನಿವಾರ ಬೆಳಿಗ್ಗೆ ಭವ್ಯ ಸ್ವಾಗತ ಕೋರಿತ್ತು. ಅಪರಾಹ್ನ ತೆಲಂಗಾಣಕ್ಕೆ ಬಂದ ಮೋದಿ ಅವರನ್ನು ‘ತೆಲಂಗಾಣಕ್ಕೆ ಪ್ರವೇಶವಿಲ್ಲ’ ಎಂಬ ಬ್ಯಾನರ್ಗಳು ಎದುರಾದವು. ಹೈದರಾಬಾದ್ನಲ್ಲಿ ಬಿಆರ್ಎಸ್ (ಈ ಹಿಂದಿನ ಟಿಆರ್ಎಸ್) ಮೋದಿ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.</p>.<p>ತೆಲುಗು ಭಾಷಿಕ ಎರಡು ರಾಜ್ಯಗಳಲ್ಲಿ ದೊರೆತ ಭಿನ್ನ ಪ್ರತಿಕ್ರಿಯೆಗಳು ರಾಜಕೀಯ ಸಮೀಕರಣವನ್ನು ಬಿಂಬಿಸುತ್ತಿವೆ. ಈ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಮೋದಿ ಯಾವ ರೀತಿ ಸಂಬಂಧ ಹೊಂದಿದ್ದಾರೆ ಎಂಬುದನ್ನೂ ಹೇಳುತ್ತಿವೆ.</p>.<p>ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರನ್ನು ಹಾಡಿ ಹೊಗಳಿದರು. ದಯಾಪರ, ಉದಾರಿ ಮುಂತಾದ ಪದಗಳಿಂದ ಬಣ್ಣಿಸಿದರು. ರಾಜ್ಯಕ್ಕೆ ಇನ್ನಷ್ಟು ಯೋಜನೆಗಳು ಮತ್ತು ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿದರು.</p>.<p>ಮೋದಿ ಅವರನ್ನು ದೆಹಲಿಯಲ್ಲಿ ಆಗಾಗ ಭೇಟಿಯಾಗುತ್ತಿರುವ ಜಗನ್ ಅವರು, ಮೋದಿ ಜೊತೆಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ್ದು ಎಂದರು.</p>.<p>ಶುಕ್ರವಾರ ಸಂಜೆ ಬಂದ ಮೋದಿ ಅವರನ್ನು ಜಗನ್ ಅವರು ವಿಮಾನ ನಿಲ್ದಾಣದಲ್ಲಿಯೇ ಬರಮಾಡಿಕೊಂಡಿದ್ದರು. ಆಂಧ್ರ ವಿಶ್ವವಿದ್ಯಾಲಯ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವೈಎಸ್ಆರ್ಪಿ ಆಯೋಜಿಸಿದೆ. ವೈಎಸ್ಆರ್ಪಿ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರೇ ಉಸ್ತುವಾರಿ ನೋಡಿಕೊಂಡಿದ್ದರು.</p>.<p>ಆದರೆ, ಹೈದರಾಬಾದ್ನಲ್ಲಿ ಎಂದಿನಂತೆ ತಿರಸ್ಕಾರವೇ ಮೋದಿ ಅವರನ್ನು ಎದುರುಗೊಂಡಿತ್ತು. ಪ್ರಧಾನಿಯನ್ನು ಬರಮಾಡಿಕೊಳ್ಳಲು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಹೋಗಲಿಲ್ಲ. ಬದಲಿಗೆ, ಪಶುಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಅವರನ್ನು ಕಳುಹಿಸಿದ್ದರು. ಪ್ರಧಾನಿಯನ್ನು ಬರಮಾಡಿಕೊಳ್ಳಲು ಕೆಸಿಆರ್ ಹೋಗದೇ ಇರುವುದು ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ.</p>.<p>‘ಬೈ ಬೈ ಮೋದಿ’ ಎಂಬ ಫ್ಲೆಕ್ಸ್ಗಳೂ ಹೈದರಾಬಾದ್ನ ಬೀದಿಗಳಲ್ಲಿ ಕಾಣಿಸಿವೆ. ‘ನನಗೆ 50 ದಿನಗಳನ್ನು ಕೊಡಿ. ನಾನು ಹೇಳಿದ್ದು ತಪ್ಪಾದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು 2016ರ ನವೆಂಬರ್ನಲ್ಲಿ ಮೋದಿ ಹೇಳಿದ್ದನ್ನು ನೆನಪಿಸುವ ಫ್ಲೆಕ್ಸ್ಗಳೂ ಇದ್ದವು.</p>.<p>‘ಈಗ 2,195 ದಿನಗಳಾಗಿವೆ. ಹಾಗಿದ್ದರೂ ಯಾವ ಸುಧಾರಣೆಯೂ ಆಗಿಲ್ಲ ಮೋದಿಯವರೇ’ ಎಂದು ಒಂದು ಬ್ಯಾನರ್ನಲ್ಲಿ ಬರೆಯಲಾಗಿದೆ. ಮೋದಿ, ಅಮಾನ್ಯ ಮಾಡಲಾದ ₹1,000 ಮುಖಬೆಲೆಯ ನೋಟು, ಪೆಟ್ರೋಲ್ ಕ್ಯಾನ್ ಮತ್ತು ಉರಿಯುತ್ತಿರುವ ಬೆಂಕಿ ಕಡ್ಡಿಯ ಚಿತ್ರವೂ ಈ ಬ್ಯಾನರ್ನಲ್ಲಿ ಇದೆ.</p>.<p>‘ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ತೆಲಂಗಾಣಕ್ಕೆ ಬಂದ ಪ್ರಧಾನಿಯನ್ನು ಈ ರೀತಿ ಹೀಯಾಳಿಸಿದ್ದರ ಹಿಂದೆ ಕೆಸಿಆರ್ ಅವರ ಕೈವಾಡ ಇದೆ’ ಎಂದು ತೆಲಂಗಾಣ ಬಿಜೆಪಿ ಆರೋಪಿಸಿದೆ.</p>.<p>ಬೇಗಂಪೇಟೆಯಲ್ಲಿ ಪಕ್ಷದ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ ಅವರು ‘ಸಾರ್ವಜನಿಕರಿಗೆ ಕೊಡಲು ಏನೂ ಇಲ್ಲದವರು ನನ್ನನ್ನು ಮೂದಲಿಸುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಇಲ್ಲಿ ಬೇಗದಲ್ಲಿಯೇ ಕಮಲ ಅರಳಲಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>