‘ಕೇಂದ್ರ ಸರ್ಕಾರವು ಹಲವು ಬಾರಿ ಮನವಿ ಮಾಡಿದರೂ, ಅಂದು ಆಡಳಿತದಲ್ಲಿದ್ದ ಸಮಾಜವಾದಿ ಪಕ್ಷವು ಫಲಾನುಭವಿಗಳ ಪಟ್ಟಿಯನ್ನೇ ಕಳುಹಿಸಿಕೊಟ್ಟಿರಲಿಲ್ಲ. ನಾವು ಹಣಕಾಸು ನೆರವು ನೀಡಲು ತಯಾರಿದ್ದೆವು. ಆದರೆ ನಮ್ಮ ಮನವಿ, ಪತ್ರಗಳನ್ನು ಸರ್ಕಾರವು ನಿರ್ಲಕ್ಷಿಸಿತ್ತು. ಅಂದಿನ ಸರ್ಕಾರದ ಈ ನಡೆಯನ್ನು ಬಡಜನರು ಇನ್ನೂ ಮರೆತಿಲ್ಲ’ ಎಂದರು. ‘ಯೋಗಿ ಆದಿತ್ಯನಾಥ್ ಅವರು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದು, ಕೇಂದ್ರದ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುವ ಮುಖಾಂತರ ರಾಜ್ಯಕ್ಕೆ ಹೊಸ ಗುರುತು ನೀಡಿದ್ದಾರೆ’ ಎಂದರು.