‘ತಕ್ಷಣ ನಮ್ಮ ಪೊಲೀಸರು ಸ್ಥಳೀಯ ಆಮ್ಲಜನಕ ವಿತರಕರನ್ನು ಸಂಪರ್ಕಿಸಿದರು. ವೈದ್ಯಕೀಯ ಆಮ್ಲಜನಕ ಎಲ್ಲೆಲ್ಲಿ ಸಿಗುತ್ತದೆ ಎಂದು ಮಾಹಿತಿ ಪಡೆದರು.ನಂತರ ಕೀರ್ತಿ ನಗರ್, ಗೊಲೆ ಮಾರ್ಕೆಟ್ ಮತ್ತು ಮಾಯಾಪುರಿಯಲ್ಲಿದ್ದ ವಿವಿಧ ಆಸ್ಪತ್ರೆಗಳಿಂದ ಹನ್ನೊಂದು ಆಮ್ಲಜನಕದ ಸಿಲಿಂಡರ್ಗಳನ್ನು ಸಂಗ್ರಹಿಸಿ, ಅಮರ್ಲೀಲಾ ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾದೆವು‘ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಪ್ರಿಯಾ ಗೌತಮ್ ತಿಳಿಸಿದರು.