‘ಕಳೆದ ವರ್ಷ ಆಗಸ್ಟ್ 8 ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಾಗಿತ್ತು. ಆ ದಿನ ತಂದೆಯವರು ‘ಭಾರತ ರತ್ನ’ ಸ್ವೀಕರಿಸಿದ್ದರು. ಸರಿಯಾಗಿ ಒಂದು ವರ್ಷದ ನಂತರ ಆಗಸ್ಟ್ 10ರಂದು ಅವರು ತೀವ್ರವಾದ ಅನಾರೋಗ್ಯಕ್ಕೀಡಾಗಿದ್ದಾರೆ. ಅವರಿಗೆ ದೇವರೇ ಒಳಿತು ಮಾಡಬೇಕು ಹಾಗೂ ಸಂತಸ, ದುಃಖವನ್ನು ಸಮಾನವಾಗಿ ಸ್ವೀಕರಿಸಲು ನನಗೆ ಶಕ್ತಿ ನೀಡಬೇಕು’ ಎಂದು ಶರ್ಮಿಷ್ಠಾ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.