‘ಈಶಾನ್ಯ ರಾಜ್ಯಗಳು ದೇಶದ ಪ್ರಗತಿಗೆ ಚಾಲನಾಶಕ್ತಿಯಾಗಲಿವೆ. ಈ ಹಿಂದಿನ ಸರ್ಕಾರಗಳು ಮಣಿಪುರ ಸೇರಿದಂತೆ ಇಡೀ ಈಶಾನ್ಯ ಪ್ರದೇಶವನ್ನೇ ನಿರ್ಲಕ್ಷಿಸಿದವು. ಬೆಟ್ಟಗಳಿಂದ ಕೂಡಿದ ಪ್ರದೇಶ, ಕಣಿವೆ ನಡುವೆ ಭೇದ ಸೃಷ್ಟಿಸಲು ಪಿತೂರಿ ನಡೆಸಿದವು. ಈಗ ಇಲ್ಲಿ ಉಗ್ರವಾದ, ಹಿಂಸಾಚಾರ ಕೊನೆಗೊಂಡಿದೆ. ಶಾಂತಿ–ಅಭಿವೃದ್ಧಿಗೆ ನಾವು ಕ್ರಮ ಕೈಗೊಂಡಿದ್ದೇವೆ’ ಎಂದರು.