ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ನೋಟು ಅಮಾನ್ಯೀಕರಣ’ ದುರಂತ: ಪ್ರಿಯಾಂಕಾ ವಾಗ್ದಾಳಿ

Last Updated 8 ನವೆಂಬರ್ 2021, 6:37 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ’ನೋಟು ಅಮಾನ್ಯೀಕರಣ’ ಕ್ರಮವನ್ನು ’ದುರಂತ’ಕ್ಕೆ ಹೋಲಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಒಂದೊಮ್ಮೆ ಈ ಕ್ರಮ ಯಶಸ್ವಿಯಾಗಿದ್ದರೆ ದೇಶದಲ್ಲಿ ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ ಮತ್ತು ಕಪ್ಪು ಹಣವನ್ನು ಏಕೆ ದೇಶಕ್ಕೆ ಮರಳಿ ತರಲಾಗಲಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ’ನೋಟು ಅಮಾನ್ಯೀಕರಣ’ ಕ್ರಮ ಕೈಗೊಂಡು ಐದು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ’ಡಿಮಾನಿಟೈಸೇಷನ್‌ ಡಿಸಾಸ್ಟರ್‌’ ಹ್ಯಾಷ್‌ಟ್ಯಾಗ್‌ನೊಂದಿಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ,’ನೋಟು ರದ್ಧತಿಯಂತಹ ಕ್ರಮಗಳು ಯಶಸ್ವಿಯಾಗಿದ್ದರೆ, ದೇಶದಲ್ಲಿ ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ? ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ? ಹಣಕಾಸಿನ ವ್ಯವಹಾರಗಳು ಏಕೆ ನಗದು ರಹಿತವಾಗಿ ನಡೆಯುತ್ತಿಲ್ಲ? ಭಯೋತ್ಪಾದನೆ ಮೇಲೆ ಏಕೆ ಪರಿಣಾಮಬೀರಿಲ್ಲ ? ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೂರದರ್ಶನದ ಮೂಲಕ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ₹ 500 ಮತ್ತು ₹1,000 ಮುಖಬೆಲೆಯ ಎಲ್ಲಾ ಕರೆನ್ಸಿ ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT