‘ವಿದ್ಯಾರ್ಥಿಗಳ ನೈಜ ಕಳವಳವನ್ನು ಈ ರೀತಿ ನಿರಾಕರಿಸುತ್ತಿರುವುದಕ್ಕೆ ಸರ್ಕಾರದ ದುರಹಂಕಾರವೇ ಕಾರಣ. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಕೇವಲ ಘೋಷವಾಕ್ಯಗಳು ಸಾಲುವುದಿಲ್ಲ’ ಎಂದು ಟ್ವೀಟ್ ಮುಖಾಂತರ ರಾಹುಲ್ ಟೀಕಿಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಟ್ವೀಟ್ ಮಾಡಿದ್ದು, ‘ ಹಲವು ವರ್ಷದಿಂದ ಎಸ್ಎಸ್ಸಿ ಹಾಗೂ ರೈಲ್ವೆಯು ನಡೆಸಿದ ಹಲವು ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿಲ್ಲ. ಸರ್ಕಾರವು ಯುವಜನರ ಮಾತನ್ನು ಕೇಳಲಿ. ಯುವಜನರಿಗೆ ಉದ್ಯೋಗ ಬೇಕೇ ವಿನಃ ಭಾಷಣವಲ್ಲ’ ಎಂದಿದ್ದಾರೆ.