ನವೆದಹಲಿ: ಅಡುಗೆ ಅನಿಲ (ಎಲ್ಪಿಜಿ) ಸಿಲಿಂಡರ್ ಬೆಲೆ ಏರಿಕೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಜನ ಸಾಮಾನ್ಯರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಜನ ಸಾಮಾನ್ಯರ ಲೂಟಿ. ಇಬ್ಬರ ಮಾತ್ರ ಅಭಿವೃದ್ದಿ ಎಂದು ವಾಗ್ದಾಳಿ ನಡೆಸಲಾಗಿದೆ.
ಫೆಬ್ರುವರಿ 14 ಭಾನುವಾರದಂದು ಅಡುಗೆ ಅನಿಲ ಪ್ರತಿ ಸಿಲಿಂಡರ್ ದರದಲ್ಲಿ ₹50 ಏರಿಕೆಯಾಗಿತ್ತು.
ಈ ಮೊದಲು ಪ್ರಧಾನಿ ನರೇಂದ್ರ ಮೋದಿ, ಹೊಸ ಕೃಷಿ ಕಾಯ್ದೆ ಮೂಲಕ ದೇಶದ ಸಂಪತ್ತನ್ನು ತಮ್ಮ ಉದ್ಯಮ ಮಿತ್ರರಿಗೆ ಹಂಚಲು ಮುಕ್ತ ಮಾರ್ಗ ಕಲ್ಪಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದರು.