ಕಾಂಗ್ರೆಸ್ನ ‘ಭಾರತ್ ಜೋಡೊ ಯಾತ್ರಾ’ ಕರ್ನಾಟಕದ ಗುಂಡ್ಲುಪೇಟೆ ಪ್ರವೇಶಿಸಿದ ವೇಳೆ ಅವರು ಕೋವಿಡ್ ಸಾಂಕ್ರಾಮಿಕದ ವೇಳೆ ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟರ ಕುಟುಂಬಗಳ ಜೊತೆ ಚರ್ಚೆ ನಡೆಸಿದರು. ಅವರು ನಡೆಸಿದ ಸಂಭಾಷಣೆಯ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.ಪ್ರತೀಕ್ಷಾ ಎಂಬ ಬಾಲಕಿ ತನ್ನ ಕುಟುಂಬ ನಿರ್ವಹಣೆಗೆ ಮತ್ತು ತನ್ನ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ‘ಪ್ರಧಾನಿ ಅವರೇ ಬಿಜೆಪಿಯ ಕೋವಿಡ್ನ ಅಸಮರ್ಪಕ ನಿರ್ವಹಣೆಯಿಂದ ತಂದೆಯನ್ನು ಕಳೆದುಕೊಂಡ ಪ್ರತೀಕ್ಷಾಳ ಮಾತುಗಳನ್ನು ಕೇಳಿಸಿಕೊಳ್ಳಿ’ ಎಂದು ವಿಡಿಯೊಗೆ ರಾಹುಲ್ ಅಡಿಬರಹ ಬರೆದಿದ್ದಾರೆ. ಅಲ್ಲದೇ, ಕೋವಿಡ್–19 ಸಂತ್ರಸ್ತರ ಕುಟುಂಬಗಳು ಸೂಕ್ತ ಪರಿಹಾರವನ್ನು ಪಡೆಯಬಾರದೇ? ಅವರಿಗೆ ಪರಿಹಾರವನ್ನು ಏಕೆ ನಿರಾಕರಿಸುತ್ತಿದ್ದೀರ? ಎಂದೂ ಅವರು ಪ್ರಶ್ನಿಸಿದ್ದಾರೆ.