ನವದೆಹಲಿ (ಪಿಟಿಐ): ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಆರ್ಜೆಡಿಯ ಮನೋಜ್ ಝಾ ಮತ್ತು ಸಿಪಿಐ (ಎಂ)ನ ಜಾನ್ ಬ್ರಿಟ್ಟಾಸ್ ಅವರು ಸೇರಿ 13 ಸಂಸದರನ್ನು 2023ನೇ ಸಾಲಿನ ಸಂಸದ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
ಡಾ.ಹೀನಾ ವಿಜಯಕುಮಾರ್ ಗವಿತ್ (ಬಿಜೆಪಿ, ಮಹಾರಾಷ್ಟ್ರ), ಗೋಪಾಲ್ ಚಿನಯ್ಯ ಶೆಟ್ಟಿ (ಬಿಜೆಪಿ, ಮಹಾರಾಷ್ಟ್ರ), ರಾಮ್ಸಿಂಗ್ ಕೊಲ್ಹೆ (ಎನ್ಸಿಪಿ, ಮಹಾರಾಷ್ಟ್ರ) ಸೇರಿದಂತೆ ಲೋಕಸಭೆಯ ಎಂಟು ಮತ್ತು ರಾಜ್ಯಸಭೆಯ ಐದು ಸಂಸದರ (ಮೂವರು ನಿವೃತ್ತರು) ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ರಾಜ್ಯ ಖಾತೆ ಸಚಿವ ಅರುಣ್ ರಾಮ್ ಮೇಘ್ವಾಲ್ ಮತ್ತು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ಕೃಷ್ಣಮೂರ್ತಿ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಇಲಾಖೆ ಸಂಬಂಧಿತ ಎರಡು ಸ್ಥಾಯಿ ಸಮಿತಿ ಮತ್ತು ಗೌರವಾನ್ವಿತ ನಾಯಕರನ್ನು ವಿಶೇಷ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.