ಕಡುಬಡವರಿಗಾಗಿ ಸಮುದಾಯ ಭೋಜನಾಲಯ ನಿರ್ಮಾಣ ಕುರಿತ ನಿರ್ದೇಶನಕ್ಕೆ ಉತ್ತರಿಸಿ ಪ್ರಮಾಣಪತ್ರ ದಾಖಲಿಸಲು ವಿಫಲರಾಗಿದ್ದ ಆರು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷದ ಫೆಬ್ರುವರಿ 17ರಂದು ತಲಾ ಐದು ಲಕ್ಷ ದಂಡ ವಿಧಿಸಿತ್ತು. ದೆಹಲಿ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒಡಿಶಾ, ಗೋವಾಗೆ ದಂಡ ವಿಧಿಸಲಾಗಿತ್ತು.