ನವದೆಹಲಿ: ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಶುಕ್ರವಾರ, ನಿಗದಿಗೊಳಿಸಿದ್ದ ಎಲ್ಲ75 ಪ್ರಕರಣಗಳ ವಿಚಾರಣೆ ನಡೆಸಲು ರಾತ್ರಿ 9.10 ಗಂಟೆಯವರೆಗೂ ಕಲಾಪ ನಡೆಸಿತು.
ಅಂದರೆ ನಿಗದಿಗಿಂತ ಹೆಚ್ಚುವರಿಯಾಗಿ ಸುಮಾರು 5 ಗಂಟೆ ಕಲಾಪ ನಡೆಸಿದೆ. ದಸರಾ ರಜೆ ಅವಧಿ ಆರಂಭಕ್ಕೂ ಮೊದಲು ನಿಗದಿತ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸುವುದು ಇದರ ಉದ್ದೇಶವಾಗಿತ್ತು.
ಸುಪ್ರೀಂ ಕೋರ್ಟ್ನ್ಯಾಯಮೂರ್ತಿಗಳು ಪ್ರಕರಣಗಳ ವಿಚಾರಣೆಗೆ ಕಲಾಪವನ್ನು ವಾರದ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೂ ನಡೆಸುತ್ತಾರೆ.