<p><strong>ನವದೆಹಲಿ:</strong> ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಆದರೆ, ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಕಟ್ಟಲಾಗದ ದಲಿತ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ಕಲ್ಪಿಸುವಂತೆ, ಐಐಟಿ–ಬಾಂಬೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.</p>.<p>‘ಐಐಟಿ–ಬಾಂಬೆಯಲ್ಲಿ ಸಿಕ್ಕಿರುವ ಅತ್ಯಮೂಲ್ಯವಾದ ಪ್ರವೇಶ ಕೈತಪ್ಪುವ ಸ್ಥಿತಿಯಲ್ಲಿ ಇರುವ ದಲಿತ ವಿದ್ಯಾರ್ಥಿಯೊಬ್ಬರು ನ್ಯಾಯಾಲಯದ ಮುಂದಿದ್ದಾರೆ. ಪ್ರವೇಶ ಅವಕಾಶ ಸಿಕ್ಕಿದ್ದರೂ ಶುಲ್ಕ ಪಾವತಿಸುವಲ್ಲಿ ಆದ ತಾಂತ್ರಿಕ ಕಾರಣಗಳಿಂದಾಗಿಯೇ ಅವರಿಗೆ ಆ ಅವಕಾಶ ಕೈತಪ್ಪುತ್ತದೆ ಎಂದಾದರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.</p>.<p>ವಿದ್ಯಾರ್ಥಿಯ ಪರಿಸ್ಥಿತಿಯನ್ನು ಪರಿಗಣಿಸಿ ಐಐಟಿ–ಬಾಂಬೆಯಲ್ಲಿ ಪ್ರವೇಶ ಕಲ್ಪಿಸುವಂತೆ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ (ಜೆಒಎಸ್ಎಎ) ಪರವಾಗಿ ಹಾಜರಿದ್ದ ವಕೀಲರಿಗೆ ಸೂಚಿಸಿತು.</p>.<p>‘ವಿದ್ಯಾರ್ಥಿಯ ಬಳಿಯಲ್ಲಿ ಹಣವಿರಲಿಲ್ಲ. ಆತನ ಸಹೋದರಿ ಹಣವನ್ನು ವರ್ಗಾಯಿಸಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಆಗಿದೆ. ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರದೇ ನಿರ್ಲಕ್ಷ್ಯ ಎಂದಾಗಿದ್ದಾರೆ, ನಾವು ನಿಮ್ಮನ್ನು ಕೇಳುತ್ತಿರಲಿಲ್ಲ’ ಎಂದ ನ್ಯಾಯಪೀಠವು, ಎಲ್ಲರ ಬಳಿಯೂ ಹಲವಾರು ಕ್ರೆಡಿಟ್ ಕಾರ್ಡ್ಗಳು ಇರುತ್ತವೆ ಎಂದು ನಿರೀಕ್ಷಿಸಲಾಗದು ಎಂದು ಹೇಳಿತು.</p>.<p>ಈಗಾಗಲೇ ಎಲ್ಲ ಸೀಟುಗಳೂ ಭರ್ತಿಯಾಗಿವೆ ಎಂದು ಜೆಒಎಸ್ಎಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.</p>.<p>ಐಐಟಿ– ಬಾಂಬೆಯಲ್ಲಿ, ಬಿ–ಟೆಕ್ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಈ ವಿದ್ಯಾರ್ಥಿಗೆ ಅ.27ರಂದು ಸೀಟು ಹಂಚಿಕೆಯಾಗಿತ್ತು.</p>.<p>ಪೂರ್ತಿಯಾಗಿ ಪ್ರವೇಶ ಶುಲ್ಕ ಭರಿಸಲು ಹಣದ ಕೊರತೆ ಆಗಿತ್ತು. ಸಹೋದರಿ ಅ.30ರಂದು ಹಣ ವರ್ಗಾಯಿಸಿದ ನಂತರ, ಅವರು ಮತ್ತೆ ಪ್ರವೇಶ ಶುಲ್ಕ ಕಟ್ಟಲು ಮುಂದಾದರು. ಆದರೆ, ಹಲವು ಪ್ರಯತ್ನಗಳ ಬಳಿಕವೂ ಅದು ಸಾಧ್ಯವಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಆದರೆ, ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಕಟ್ಟಲಾಗದ ದಲಿತ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ಕಲ್ಪಿಸುವಂತೆ, ಐಐಟಿ–ಬಾಂಬೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.</p>.<p>‘ಐಐಟಿ–ಬಾಂಬೆಯಲ್ಲಿ ಸಿಕ್ಕಿರುವ ಅತ್ಯಮೂಲ್ಯವಾದ ಪ್ರವೇಶ ಕೈತಪ್ಪುವ ಸ್ಥಿತಿಯಲ್ಲಿ ಇರುವ ದಲಿತ ವಿದ್ಯಾರ್ಥಿಯೊಬ್ಬರು ನ್ಯಾಯಾಲಯದ ಮುಂದಿದ್ದಾರೆ. ಪ್ರವೇಶ ಅವಕಾಶ ಸಿಕ್ಕಿದ್ದರೂ ಶುಲ್ಕ ಪಾವತಿಸುವಲ್ಲಿ ಆದ ತಾಂತ್ರಿಕ ಕಾರಣಗಳಿಂದಾಗಿಯೇ ಅವರಿಗೆ ಆ ಅವಕಾಶ ಕೈತಪ್ಪುತ್ತದೆ ಎಂದಾದರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಎ.ಎಸ್. ಬೋಪಣ್ಣ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.</p>.<p>ವಿದ್ಯಾರ್ಥಿಯ ಪರಿಸ್ಥಿತಿಯನ್ನು ಪರಿಗಣಿಸಿ ಐಐಟಿ–ಬಾಂಬೆಯಲ್ಲಿ ಪ್ರವೇಶ ಕಲ್ಪಿಸುವಂತೆ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ (ಜೆಒಎಸ್ಎಎ) ಪರವಾಗಿ ಹಾಜರಿದ್ದ ವಕೀಲರಿಗೆ ಸೂಚಿಸಿತು.</p>.<p>‘ವಿದ್ಯಾರ್ಥಿಯ ಬಳಿಯಲ್ಲಿ ಹಣವಿರಲಿಲ್ಲ. ಆತನ ಸಹೋದರಿ ಹಣವನ್ನು ವರ್ಗಾಯಿಸಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಆಗಿದೆ. ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರದೇ ನಿರ್ಲಕ್ಷ್ಯ ಎಂದಾಗಿದ್ದಾರೆ, ನಾವು ನಿಮ್ಮನ್ನು ಕೇಳುತ್ತಿರಲಿಲ್ಲ’ ಎಂದ ನ್ಯಾಯಪೀಠವು, ಎಲ್ಲರ ಬಳಿಯೂ ಹಲವಾರು ಕ್ರೆಡಿಟ್ ಕಾರ್ಡ್ಗಳು ಇರುತ್ತವೆ ಎಂದು ನಿರೀಕ್ಷಿಸಲಾಗದು ಎಂದು ಹೇಳಿತು.</p>.<p>ಈಗಾಗಲೇ ಎಲ್ಲ ಸೀಟುಗಳೂ ಭರ್ತಿಯಾಗಿವೆ ಎಂದು ಜೆಒಎಸ್ಎಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.</p>.<p>ಐಐಟಿ– ಬಾಂಬೆಯಲ್ಲಿ, ಬಿ–ಟೆಕ್ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಈ ವಿದ್ಯಾರ್ಥಿಗೆ ಅ.27ರಂದು ಸೀಟು ಹಂಚಿಕೆಯಾಗಿತ್ತು.</p>.<p>ಪೂರ್ತಿಯಾಗಿ ಪ್ರವೇಶ ಶುಲ್ಕ ಭರಿಸಲು ಹಣದ ಕೊರತೆ ಆಗಿತ್ತು. ಸಹೋದರಿ ಅ.30ರಂದು ಹಣ ವರ್ಗಾಯಿಸಿದ ನಂತರ, ಅವರು ಮತ್ತೆ ಪ್ರವೇಶ ಶುಲ್ಕ ಕಟ್ಟಲು ಮುಂದಾದರು. ಆದರೆ, ಹಲವು ಪ್ರಯತ್ನಗಳ ಬಳಿಕವೂ ಅದು ಸಾಧ್ಯವಾಗಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>