ನ್ಯಾಯಮೂರ್ತಿಗಳಾದ ದಿನೇಶ್
ಮಾಹೇಶ್ವರಿ ಮತ್ತು ಸಿ.ಟಿ. ರವಿಕುಮಾರ್ ಅವರೂ ಇದ್ದ ತ್ರಿಸದಸ್ಯ ಪೀಠ, ‘ಕಪ್ಪು ಹಣ ಚಲಾವಣೆ ಮತ್ತು ಹಣ ಅಕ್ರಮ ವರ್ಗಾವಣೆ ಅಪರಾಧಗಳನ್ನು ತಡೆಗಟ್ಟಲು ನ್ಯಾಯಾಲಯ ಸಂಪೂರ್ಣ ಬೆಂಬಲ ನೀಡುತ್ತಿದೆ. ಇಂತಹ ಅಪರಾಧಗಳನ್ನು ರಾಷ್ಟ್ರವು ಸಹಿಸದು. ಹಣ ಅಕ್ರಮ ವರ್ಗಾವಣೆ ಗಂಭೀರ ಅಪರಾಧ. ಇದರ ವಿರುದ್ಧದ ಕಾಯ್ದೆ ಉದಾತ್ತವಾಗಿದೆ. ಕಾಯ್ದೆ ಬಗೆಗಿನ ತೀರ್ಪಿನ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿಲ್ಲ. ಆದರೆ, ಇದರಲ್ಲಿ ಅಗತ್ಯವಿರುವ ಎರಡು ಅಂಶಗಳನ್ನು ಮಾತ್ರ ಮರುಪರಿಶೀಲಿಸಲಾಗುವುದು’ ಎಂದು ಅಭಿಪ್ರಾಯಪಟ್ಟಿತು.