<p><strong>ಮುಂಬೈ</strong>: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸೆಲ್ಸುರಾ ಎಂಬಲ್ಲಿ ಸೇತುವೆಯಿಂದ ಎಸ್ಯುವಿಯೊಂದು ಬಿದ್ದ ಪರಿಣಾಮ ಮಂಗಳವಾರ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.</p>.<p>ವಿಷ್ಕರ್ ರಹಾಂಗಡಾಲೆ ಹಾಗೂ ಉತ್ತರ ಪ್ರದೇಶದವರಾದ ನೀರಜ್ ಚೌಹಾಣ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಬಿಹಾರ ಮೂಲದ ವಿವೇಕ್ ನಂದನ್ ಮತ್ತು ಪವನ್ ಶಕ್ತಿ ಹಾಗೂ ಒಡಿಶಾದ ನಿತೀಶ್ಕುಮಾರ್ ಸಿಂಗ್ ಮೃತಪಟ್ಟವರು.</p>.<p>ವಿಷ್ಕರ್, ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ತಿರೋಡಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಾಂಗಡಾಲೆ ಅವರ ಪುತ್ರ.</p>.<p>‘ಮೃತರೆಲ್ಲರೂ ವಾರ್ಧಾದ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಈ ಅಪಘಾತ ಮಧ್ಯರಾತ್ರಿ ಸಂಭವಿಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ತಿಳಿಸಿದ್ದಾರೆ.</p>.<p>‘ಯವತ್ಮಾಲ್ ಜಿಲ್ಲೆಯಲ್ಲಿ ನಡೆದ ಸಹಪಾಠಿಯೊಬ್ಬರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮರಳುವಾಗ ಈ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಯೊಬ್ಬ ವಾಹನ ಚಲಾಯಿಸುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.</p>.<p><strong>ಶೋಕ</strong>: ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಸಾವಿಗೆ ಶೋಕಿಸಿದ್ದಾರೆ.</p>.<p>‘ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರ ಕುಟುಂಬಕ್ಕೆ ₹ 50,000 ಪರಿಹಾರಧನ ನೀಡುವುದಾಗಿ’ ಪ್ರಧಾನಿ ಘೋಷಿಸಿದ್ದಾರೆ.</p>.<p><a href="https://www.prajavani.net/entertainment/cinema/mumbai-court-discharges-shilpa-shetty-in-richard-gere-kissing-case-904972.html" itemprop="url">ಶಿಲ್ಪಾ ಶೆಟ್ಟಿಗೆ 'ಮುತ್ತು' ಕೊಟ್ಟ ಪ್ರಕರಣ: 15 ವರ್ಷಗಳ ಬಳಿಕ ನಟಿ ಖುಲಾಸೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸೆಲ್ಸುರಾ ಎಂಬಲ್ಲಿ ಸೇತುವೆಯಿಂದ ಎಸ್ಯುವಿಯೊಂದು ಬಿದ್ದ ಪರಿಣಾಮ ಮಂಗಳವಾರ ಏಳು ಜನ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.</p>.<p>ವಿಷ್ಕರ್ ರಹಾಂಗಡಾಲೆ ಹಾಗೂ ಉತ್ತರ ಪ್ರದೇಶದವರಾದ ನೀರಜ್ ಚೌಹಾಣ್, ಪ್ರತ್ಯುಷ್ ಸಿಂಗ್, ಶುಭಂ ಜೈಸ್ವಾಲ್, ಬಿಹಾರ ಮೂಲದ ವಿವೇಕ್ ನಂದನ್ ಮತ್ತು ಪವನ್ ಶಕ್ತಿ ಹಾಗೂ ಒಡಿಶಾದ ನಿತೀಶ್ಕುಮಾರ್ ಸಿಂಗ್ ಮೃತಪಟ್ಟವರು.</p>.<p>ವಿಷ್ಕರ್, ಮಹಾರಾಷ್ಟ್ರದ ಗೋಂಡಿಯಾ ಜಿಲ್ಲೆಯ ತಿರೋಡಾ ಕ್ಷೇತ್ರದ ಬಿಜೆಪಿ ಶಾಸಕ ವಿಜಯ್ ರಹಾಂಗಡಾಲೆ ಅವರ ಪುತ್ರ.</p>.<p>‘ಮೃತರೆಲ್ಲರೂ ವಾರ್ಧಾದ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಈ ಅಪಘಾತ ಮಧ್ಯರಾತ್ರಿ ಸಂಭವಿಸಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ತಿಳಿಸಿದ್ದಾರೆ.</p>.<p>‘ಯವತ್ಮಾಲ್ ಜಿಲ್ಲೆಯಲ್ಲಿ ನಡೆದ ಸಹಪಾಠಿಯೊಬ್ಬರ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮರಳುವಾಗ ಈ ಅಪಘಾತ ಸಂಭವಿಸಿದೆ. ವಿದ್ಯಾರ್ಥಿಯೊಬ್ಬ ವಾಹನ ಚಲಾಯಿಸುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.</p>.<p><strong>ಶೋಕ</strong>: ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಸಾವಿಗೆ ಶೋಕಿಸಿದ್ದಾರೆ.</p>.<p>‘ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ, ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರ ಕುಟುಂಬಕ್ಕೆ ₹ 50,000 ಪರಿಹಾರಧನ ನೀಡುವುದಾಗಿ’ ಪ್ರಧಾನಿ ಘೋಷಿಸಿದ್ದಾರೆ.</p>.<p><a href="https://www.prajavani.net/entertainment/cinema/mumbai-court-discharges-shilpa-shetty-in-richard-gere-kissing-case-904972.html" itemprop="url">ಶಿಲ್ಪಾ ಶೆಟ್ಟಿಗೆ 'ಮುತ್ತು' ಕೊಟ್ಟ ಪ್ರಕರಣ: 15 ವರ್ಷಗಳ ಬಳಿಕ ನಟಿ ಖುಲಾಸೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>