ನೀಲಗಿರಿಯ ಪ್ರದೇಶ, ನಗರದ ಹೊರವಲಯದಲ್ಲಿರುವ ಸುಮಾರು ₹2,000 ಕೋಟಿ ಮೌಲ್ಯದ ಈ ಬಂಗಲೆಗಳನ್ನು ವಶಪಡಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಯು ಶಶಿಕಲಾ ಹಾಗೂ ಅವರ ಸಂಬಂಧಿಗಳಾದ ಇಳವರಸಿ, ಜಯಲಲಿತಾ ಅವರ ದತ್ತುಪುತ್ರ ವಿ.ಎನ್. ಸುಧಾಕರನ್ ಅವರಿಗೆ ನೋಟಿಸ್ ನೀಡಿದೆ. ‘1988ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯ ಸೆಕ್ಷನ್ 24(3)ರ ಅಡಿಯಲ್ಲಿ ಈ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಯು.ಎನ್. ದಿಲೀಪ್ ಹೇಳಿದ್ದಾರೆ. ಜಯಲಲಿತಾ ಅವರ ಉತ್ತರಾಧಿಕಾರಿಗಳೆಂದು ಮೆಡ್ರಾಸ್ ಹೈಕೋರ್ಟ್ ಘೋಷಿಸಿರುವ ಜೆ. ದೀಪಾ ಹಾಗೂ ಜೆ. ದೀಪಕ್ ಅವರಿಗೂ ನೋಟಿಸ್ ಜಾರಿ ಮಾಡಿರುವುದು ವಿಶೇಷವಾಗಿದೆ.