ವೀರ ಸಾವರ್ಕರ್ ಬಗೆಗಿನ ಪಕ್ಷದ ನಿಲುವು ಬದಲಾಗದು: ಶಿವಸೇನಾ ಮುಖಂಡ ಸಂಜಯ್ ರಾವತ್
ಮುಂಬೈ: ವೀರ ಸಾವರ್ಕರ್ ಬಗ್ಗೆ ತಮ್ಮ ಪಕ್ಷ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಈ ವಿಚಾರವಾಗಿ ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, 'ವೀರ ಸಾವರ್ಕರ್ ಬಗ್ಗೆ ಶಿವಸೇನಾ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ. ಈ ಹಿಂದೆ ಅವರನ್ನು ಅವಮಾನಿಸುವ ಸಲುವಾಗಿ ಬೇರೆಯವರು ಅನುಚಿತ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಾವು ಸಾವರ್ಕರ್ ಪರವಾಗಿ ನಿಂತಿದ್ದೇವೆ. ಕಾರಣ, ನಾವು ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ' ಎಂದು ರಾವತ್ ತಿಳಿಸಿದ್ದಾರೆ.
'ಇಂದು ನಮ್ಮನ್ನು ಟೀಕಿಸುವವರು, ಸಾವರ್ಕರ್ ಅವರಿಗೆ ಭಾರತ ರತ್ನ ಪುರಸ್ಕಾರವನ್ನು ಏಕೆ ನೀಡಲಿಲ್ಲ ಎಂಬುದರ ಬಗ್ಗೆ ಉತ್ತರಿಸಲಿ' ಎಂದು ಸಂಜಯ್ ರಾವತ್ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
Shiv Sena never changed its stand on Veer Savarkar. Whenever an inappropriate comment was made to insult him, we stood by him. We've always had an emotional connection with him. Those who are criticising us must answer why didn't they give him Bharat Ratna: Sanjay Raut, Shiv Sena pic.twitter.com/XBRPyCBpZ5
— ANI (@ANI) October 26, 2020
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.