ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರ ಸಾವರ್ಕರ್‌ ಬಗೆಗಿನ ಪಕ್ಷದ ನಿಲುವು ಬದಲಾಗದು: ಶಿವಸೇನಾ ಮುಖಂಡ ಸಂಜಯ್‌ ರಾವತ್

Last Updated 26 ಅಕ್ಟೋಬರ್ 2020, 7:43 IST
ಅಕ್ಷರ ಗಾತ್ರ

ಮುಂಬೈ: ವೀರ ಸಾವರ್ಕರ್‌ ಬಗ್ಗೆ ತಮ್ಮ ಪಕ್ಷ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಶಿವಸೇನಾ ಮುಖಂಡ ಸಂಜಯ್‌ ರಾವತ್‌ ಹೇಳಿದ್ದಾರೆ.

ಈ ವಿಚಾರವಾಗಿ ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, 'ವೀರ ಸಾವರ್ಕರ್‌ ಬಗ್ಗೆ ಶಿವಸೇನಾ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ. ಈ ಹಿಂದೆ ಅವರನ್ನು ಅವಮಾನಿಸುವ ಸಲುವಾಗಿ ಬೇರೆಯವರು ಅನುಚಿತ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಾವು ಸಾವರ್ಕರ್‌ ಪರವಾಗಿ ನಿಂತಿದ್ದೇವೆ. ಕಾರಣ, ನಾವು ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ' ಎಂದು ರಾವತ್‌ ತಿಳಿಸಿದ್ದಾರೆ.

'ಇಂದು ನಮ್ಮನ್ನು ಟೀಕಿಸುವವರು, ಸಾವರ್ಕರ್‌ ಅವರಿಗೆ ಭಾರತ ರತ್ನ ಪುರಸ್ಕಾರವನ್ನು ಏಕೆ ನೀಡಲಿಲ್ಲ ಎಂಬುದರ ಬಗ್ಗೆ ಉತ್ತರಿಸಲಿ' ಎಂದು ಸಂಜಯ್‌ ರಾವತ್‌ ಬಿಜೆಪಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT