ಈ ವಿಚಾರವಾಗಿ ಮುಂಬೈನಲ್ಲಿ ಸೋಮವಾರ ಮಾತನಾಡಿರುವ ಅವರು, 'ವೀರ ಸಾವರ್ಕರ್ ಬಗ್ಗೆ ಶಿವಸೇನಾ ಹೊಂದಿರುವ ನಿಲುವು ಎಂದಿಗೂ ಬದಲಾಗುವುದಿಲ್ಲ. ಈ ಹಿಂದೆ ಅವರನ್ನು ಅವಮಾನಿಸುವ ಸಲುವಾಗಿ ಬೇರೆಯವರು ಅನುಚಿತ ಹೇಳಿಕೆ ನೀಡಿದ್ದರು. ಆ ಸಂದರ್ಭದಲ್ಲಿ ನಾವು ಸಾವರ್ಕರ್ ಪರವಾಗಿ ನಿಂತಿದ್ದೇವೆ. ಕಾರಣ, ನಾವು ಅವರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ' ಎಂದು ರಾವತ್ ತಿಳಿಸಿದ್ದಾರೆ.