ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಗಡ ಕೋಟೆಯಲ್ಲಿ ಶಿವಾಜಿ ಕಾಲದ ಚಿನ್ನದ ಬಳೆ ಪತ್ತೆ

ಮಹಾರಾಷ್ಟ್ರ: ಉತ್ಖನನ ವೇಳೆಯಲ್ಲಿ ದೊರೆತ ಬಳೆ
Last Updated 3 ಏಪ್ರಿಲ್ 2021, 10:55 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರಾಯಗಡ ಕೋಟೆಯ ಉತ್ಖನನದ ವೇಳೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅವರ ಕಾಲದ್ದು ಎನ್ನಲಾದ ಚಿನ್ನದ ಬಳೆಯೊಂದು ಪತ್ತೆಯಾಗಿದೆ.

ಮುಂಬೈನಿಂದ 160 ಕಿ.ಮೀ. ದೂರವಿರುವ ಮಹಾಡ್‌ನಲ್ಲಿರುವ ಬೆಟ್ಟದ ಮೇಲಿರುವ ಕೋಟೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಮತ್ತು ರಾಯಗಡ ಅಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಸಹಯೋಗದಲ್ಲಿ ಉತ್ಖನನ ಕೈಗೊಳ್ಳಲಾಗಿದೆ.

ಚಿನ್ನದ ಬಳೆ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ ಶ್ರೀ ಸಂಭಾಜಿರಾಜೇ ಛತ್ರಪತಿ ಅವರು ರಾಯಗಡ ಕೋಟೆಗೆ ಭೇಟಿ ನೀಡಿ, ಚಿನ್ನದ ಬಳೆಯನ್ನು ಪರಿಶೀಲಿಸಿದರು.

‘ಇದು ಶಿವಾಜಿ ಮಹಾರಾಜರ ಸಮಕಾಲೀನ ಜೀವನಶೈಲಿ, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ರಾಯಗಡದ ಉತ್ಖನನ ಮತ್ತು ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡ ಎಎಸ್ಐನ ಪ್ರಯತ್ನ ಶ್ಲಾಘನೀಯ’ ಎಂದು ಕೊಲ್ಹಾಪುರದ ರಾಜಮನೆತನದವರೂ ಹಾಗೂ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರೂ ಆಗಿರುವ ಸಂಭಾಜಿರಾಜೇ ಅವರು ಹೇಳಿದರು.

‘ಈಗ ಚಿನ್ನದ ಬಳೆ ಪತ್ತೆಯಾಗಿದೆ.ಈ ಹಿಂದೆ ಉತ್ಖನನ ವೇಳೆಯಲ್ಲಿ ಅನೇಕ ಆಭರಣಗಳು, ಪಾತ್ರೆಗಳು, ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತಿದ್ದವು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ವಸ್ತುಗಳು ಉತ್ಖನನ ವೇಳೆಯಲ್ಲಿ ದೊರೆಯುವ ಸಾಧ್ಯತೆ ಇದೆ’ ಎಂದು ಆರ್‌ಡಿಎ ಅಧ್ಯಕ್ಷರೂ ಆಗಿರುವ ಸಂಭಾಜಿ ಅವರು ಹೇಳಿದರು.

1674ರಲ್ಲಿ ಶಿವಾಜಿ ಮಹಾರಾಜ ರಾಯಗಡ ಕೋಟೆಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT