<p><strong>ನವದೆಹಲಿ:</strong> ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.</p>.<p>ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದರ್ ಶರ್ಮಾ ಮತ್ತು ಸುಬ್ರಮಣಿಯನ್ ಪ್ರಸಾದ್ ಅವರಿದ್ದ ಪೀಠ ಈ ಅರ್ಜಿ ಪುರಸ್ಕರಿಸುವಂತಹ ಯಾವುದೇ ಅಂಶವು ನಮಗೆ ಕಂಡಬಂದಿಲ್ಲ ಎಂದಿದೆ.</p>.<p>ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಪೀಠ, ಇದು ಒಂದು ರೀತಿಯ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದೆ. ಮೃತ ಪೋಷಕರಿಗೆ ದೆಹಲಿ ಪೊಲೀಸ್ ತನಿಖೆಯ ವಿರುದ್ಧ ಯಾವುದೇ ಆಕ್ಷೇಪವಿಲ್ಲ. ಆದರೆ ನಿಮಗೆ ತನಿಖೆ ಕುರಿತು ಆಕ್ಷೇಪವೇಕೆ ಎಂದು ಕೇಳಿದೆ.</p>.<p>ಈ ರೀತಿ ಪ್ರಕರಣ ವರ್ಗಾವಣೆಗೆ ನಾವು ತನಿಖೆ ನಿಯಂತ್ರಣ ಸಂಸ್ಥೆಯಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣದ ಶೇ.80ರಷ್ಟು ವಿಚಾರಣೆ ಮುಗಿದಿದ್ದು, ಎಸಿಪಿ ನೇತೃತ್ವದ 200 ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಎಂದು ಪೀಠ ತಿಳಿಸಿದೆ.</p>.<p>ವಕೀಲ ಜೋಗಿಂದರ್ ಟುಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.</p>.<p>ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸತೀಶ್ ಚಂದರ್ ಶರ್ಮಾ ಮತ್ತು ಸುಬ್ರಮಣಿಯನ್ ಪ್ರಸಾದ್ ಅವರಿದ್ದ ಪೀಠ ಈ ಅರ್ಜಿ ಪುರಸ್ಕರಿಸುವಂತಹ ಯಾವುದೇ ಅಂಶವು ನಮಗೆ ಕಂಡಬಂದಿಲ್ಲ ಎಂದಿದೆ.</p>.<p>ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಪೀಠ, ಇದು ಒಂದು ರೀತಿಯ ಪ್ರಚಾರದ ಹಿತಾಸಕ್ತಿ ಮೊಕದ್ದಮೆಯಾಗಿದೆ. ಮೃತ ಪೋಷಕರಿಗೆ ದೆಹಲಿ ಪೊಲೀಸ್ ತನಿಖೆಯ ವಿರುದ್ಧ ಯಾವುದೇ ಆಕ್ಷೇಪವಿಲ್ಲ. ಆದರೆ ನಿಮಗೆ ತನಿಖೆ ಕುರಿತು ಆಕ್ಷೇಪವೇಕೆ ಎಂದು ಕೇಳಿದೆ.</p>.<p>ಈ ರೀತಿ ಪ್ರಕರಣ ವರ್ಗಾವಣೆಗೆ ನಾವು ತನಿಖೆ ನಿಯಂತ್ರಣ ಸಂಸ್ಥೆಯಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣದ ಶೇ.80ರಷ್ಟು ವಿಚಾರಣೆ ಮುಗಿದಿದ್ದು, ಎಸಿಪಿ ನೇತೃತ್ವದ 200 ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಎಂದು ಪೀಠ ತಿಳಿಸಿದೆ.</p>.<p>ವಕೀಲ ಜೋಗಿಂದರ್ ಟುಲಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>