<p><strong>ನವದೆಹಲಿ:</strong> ಸಿಂಗಪುರದಲ್ಲಿ ಕಂಡುಬಂದಿರುವ ಕೊರೊನಾ ವೈರಸ್ನ ತಳಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿರುವ ಹೇಳಿಕೆಗೆ ಸಿಂಗಪುರ ಸರ್ಕಾರ ಕಟುವಾದ ಮಾತುಗಳಲ್ಲಿ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ.</p>.<p>ಕೇಜ್ರಿವಾಲ್ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.</p>.<p>ಇನ್ನೊಂದೆಡೆ, ಸಿಂಗಪುರ ಸರ್ಕಾರದಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆ ಭಾರತದ ನಿಲುವನ್ನು ಪ್ರತಿನಿಧಿಸುವುದಿಲ್ಲ’ ಎಂದು ಹೇಳಿದ್ದಾರೆ.</p>.<p>‘ಕೋವಿಡ್–19 ಪಿಡುಗು ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಿಂಗಪುರ ಬೆಂಬಲ ನೀಡುತ್ತಿದೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳು ಹಾಗೂ ಆಮ್ಲಜನಕ ಸಿಲಿಂಡರ್ಗಳು, ಕಾನ್ಸಂಟ್ರೇಟರ್ಗಳನ್ನು ಕಳಿಸುವ ಮೂಲಕ ಸಿಂಗಪುರ ಭಾರತದ ಹೋರಾಟಕ್ಕೆ ಕೈಜೋಡಿಸಿದೆ’ ಎಂದು ಜೈಶಂಕರ್ ತಮ್ಮ ಟ್ವೀಟ್ನಲ್ಲಿ ಪ್ರಶಂಸಿಸಿದ್ದಾರೆ.</p>.<p>‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ನ ತಳಿ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದೆ. ಈ ತಳಿ ಭಾರತದಲ್ಲಿ ಕೋವಿಡ್ನ ಮೂರನೇ ಅಲೆಗೆ ಕಾರಣವಾಗಬಹುದು’ ಎಂದು ಕೇಜ್ರಿವಾಲ್ ಮಂಗಳವಾರ ಹೇಳಿದ್ದರು.</p>.<p>ಈ ಹೇಳಿಕೆಯನ್ನು ವಿರೋಧಿಸಿರುವ ಸಿಂಗಪುರ ಸರ್ಕಾರ, ಭಾರತದ ಹೈಕಮಿಷನರ್ ಪಿ.ಕುಮಾರನ್ ಅವರ ಬಳಿ ತನ್ನ ಆಕ್ಷೇಪವನ್ನು ದಾಖಲಿಸಿತು.</p>.<p>‘ಕೊರೊನಾ ವೈರಸ್ನ ಸಿಂಗಪುರ ತಳಿ ಎಂಬುದು ಇಲ್ಲ. ಈಗ ವರದಿಯಾಗುತ್ತಿರುವ ಕೋವಿಡ್–19 ಪ್ರಕರಣಗಳಿಗೆ ವೈರಸ್ನ ಬಿ.1.617 ತಳಿಯೇ ಕಾರಣವಾಗಿದೆ. ಈ ತಳಿ ಭಾರತದಲ್ಲಿಯೇ ಮೊದಲು ಪತ್ತೆಯಾಗಿದೆ’ ಎಂದು ಸಿಂಗಪುರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.</p>.<p>‘ಪ್ರಮುಖ ರಾಜಕೀಯ ಮುಖಂಡರೊಬ್ಬರು ವಾಸ್ತವಾಂಶ ಅರಿಯದೇ ಇಂಥ ಹೇಳಿಕೆ ನೀಡಿರುವುದು ನಿರಾಶೆ ತರುವ ಸಂಗತಿ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.</p>.<p>ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ಕೋವಿಡ್–19ಗೆ ಕಾರಣವಾಗುವ ವೈರಸ್ನ ತಳಿಗಳ ಕುರಿತು ಅಭಿಪ್ರಾಯ ತಿಳಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾವುದೇ ಅರ್ಹತೆ ಹೊಂದಿಲ್ಲ ಎಂಬುದಾಗಿ ಭಾರತದ ಹೈಕಮಿಷನರ್ ಅವರು ಸಿಂಗಪುರ ಸರ್ಕಾರಕ್ಕೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಈ ಕುರಿತು ಟ್ವೀಟ್ ಮಾಡಿರುವ ಬಾಗ್ಚಿ ಅವರು, ‘ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ನೀತಿಗಳಕುರಿತು ಹೇಳಿಕೆ ನೀಡಲು ಸಹ ಕೇಜ್ರಿವಾಲ್ ಅರ್ಹರಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಿಂಗಪುರದಲ್ಲಿ ಕಂಡುಬಂದಿರುವ ಕೊರೊನಾ ವೈರಸ್ನ ತಳಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೀಡಿರುವ ಹೇಳಿಕೆಗೆ ಸಿಂಗಪುರ ಸರ್ಕಾರ ಕಟುವಾದ ಮಾತುಗಳಲ್ಲಿ ಬುಧವಾರ ಆಕ್ಷೇಪ ವ್ಯಕ್ತಪಡಿಸಿದೆ.</p>.<p>ಕೇಜ್ರಿವಾಲ್ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಹ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.</p>.<p>ಇನ್ನೊಂದೆಡೆ, ಸಿಂಗಪುರ ಸರ್ಕಾರದಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೇಳಿಕೆ ಭಾರತದ ನಿಲುವನ್ನು ಪ್ರತಿನಿಧಿಸುವುದಿಲ್ಲ’ ಎಂದು ಹೇಳಿದ್ದಾರೆ.</p>.<p>‘ಕೋವಿಡ್–19 ಪಿಡುಗು ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಿಂಗಪುರ ಬೆಂಬಲ ನೀಡುತ್ತಿದೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳು ಹಾಗೂ ಆಮ್ಲಜನಕ ಸಿಲಿಂಡರ್ಗಳು, ಕಾನ್ಸಂಟ್ರೇಟರ್ಗಳನ್ನು ಕಳಿಸುವ ಮೂಲಕ ಸಿಂಗಪುರ ಭಾರತದ ಹೋರಾಟಕ್ಕೆ ಕೈಜೋಡಿಸಿದೆ’ ಎಂದು ಜೈಶಂಕರ್ ತಮ್ಮ ಟ್ವೀಟ್ನಲ್ಲಿ ಪ್ರಶಂಸಿಸಿದ್ದಾರೆ.</p>.<p>‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ನ ತಳಿ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದೆ. ಈ ತಳಿ ಭಾರತದಲ್ಲಿ ಕೋವಿಡ್ನ ಮೂರನೇ ಅಲೆಗೆ ಕಾರಣವಾಗಬಹುದು’ ಎಂದು ಕೇಜ್ರಿವಾಲ್ ಮಂಗಳವಾರ ಹೇಳಿದ್ದರು.</p>.<p>ಈ ಹೇಳಿಕೆಯನ್ನು ವಿರೋಧಿಸಿರುವ ಸಿಂಗಪುರ ಸರ್ಕಾರ, ಭಾರತದ ಹೈಕಮಿಷನರ್ ಪಿ.ಕುಮಾರನ್ ಅವರ ಬಳಿ ತನ್ನ ಆಕ್ಷೇಪವನ್ನು ದಾಖಲಿಸಿತು.</p>.<p>‘ಕೊರೊನಾ ವೈರಸ್ನ ಸಿಂಗಪುರ ತಳಿ ಎಂಬುದು ಇಲ್ಲ. ಈಗ ವರದಿಯಾಗುತ್ತಿರುವ ಕೋವಿಡ್–19 ಪ್ರಕರಣಗಳಿಗೆ ವೈರಸ್ನ ಬಿ.1.617 ತಳಿಯೇ ಕಾರಣವಾಗಿದೆ. ಈ ತಳಿ ಭಾರತದಲ್ಲಿಯೇ ಮೊದಲು ಪತ್ತೆಯಾಗಿದೆ’ ಎಂದು ಸಿಂಗಪುರ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.</p>.<p>‘ಪ್ರಮುಖ ರಾಜಕೀಯ ಮುಖಂಡರೊಬ್ಬರು ವಾಸ್ತವಾಂಶ ಅರಿಯದೇ ಇಂಥ ಹೇಳಿಕೆ ನೀಡಿರುವುದು ನಿರಾಶೆ ತರುವ ಸಂಗತಿ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.</p>.<p>ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ‘ಕೋವಿಡ್–19ಗೆ ಕಾರಣವಾಗುವ ವೈರಸ್ನ ತಳಿಗಳ ಕುರಿತು ಅಭಿಪ್ರಾಯ ತಿಳಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾವುದೇ ಅರ್ಹತೆ ಹೊಂದಿಲ್ಲ ಎಂಬುದಾಗಿ ಭಾರತದ ಹೈಕಮಿಷನರ್ ಅವರು ಸಿಂಗಪುರ ಸರ್ಕಾರಕ್ಕೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.</p>.<p>ಈ ಕುರಿತು ಟ್ವೀಟ್ ಮಾಡಿರುವ ಬಾಗ್ಚಿ ಅವರು, ‘ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ನೀತಿಗಳಕುರಿತು ಹೇಳಿಕೆ ನೀಡಲು ಸಹ ಕೇಜ್ರಿವಾಲ್ ಅರ್ಹರಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>