ಮಾವು, ಉತ್ತರ ಪ್ರದೇಶ: 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಜಂಟಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಸುಹೇಲ್ದೇವ್ ಭಾರತೀಯ ಸಮಾಜವಾದಿ ಪಕ್ಷವು (ಎಸ್ಬಿಎಸ್ಪಿ) ಬುಧವಾರ ತಮ್ಮ ಮೈತ್ರಿಯನ್ನು ಘೋಷಿಸಿವೆ.
ಬಿಜೆಪಿಯನ್ನುರಾಜ್ಯದಿಂದ ಹೊರಹಾಕಿರಿ ಎಂಬ ಘೋಷಣೆಯನ್ನು ಎರಡೂ ಪಕ್ಷಗಳು ಇದೇ ವೇಳೆ ಪ್ರಕಟಿಸಿದವು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ವಿಧಾನಸಭೆ ಚುನಾವಣೆಗೆ ಎರಡು ಪಕ್ಷಗಳ ಮೈತ್ರಿಯನ್ನು ಘೋಷಿಸಿ ಮಾತನಾಡಿದರು.
‘ಎಸ್ಪಿ ಮತ್ತು ಎಸ್ಬಿಎಸ್ಪಿಯ ಕೆಂಪು ಮತ್ತು ಹಳದಿ ಬಣ್ಣಗಳು ಒಂದಾದಾಗ ದೆಹಲಿ ಮತ್ತು ಲಖನೌದಲ್ಲಿ ಯಾರು ಕೋಪಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಯಾದವ್ ಅವರು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳನ್ನು ಉಲ್ಲೇಖಿಸಿ ಹೇಳಿದರು.