ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯದನ್ನು ಬಿಡಿ, ‌ಹೊಸದಾಗಿ ಮಾತುಕತೆ ಆರಂಭಿಸಿ: ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ

ರೈತ ಸಂಘಟನೆಗಳ ಪ್ರತಿಭಟನೆ
Last Updated 20 ಜನವರಿ 2021, 7:39 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಮಸೂದೆಗಳ ಕುರಿತುಯಾವುದೇ ಗಟ್ಟಿಯಾದ ನಿರ್ಣಯಗಳಿಲ್ಲದೇ ಇಲ್ಲಿವರೆಗೂ ರೈತರು ಮತ್ತು ಸರ್ಕಾರದ ನಡುವೆ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ಪಕ್ಕಕ್ಕಿಟ್ಟು, ಹೊಸದಾಗಿ ಮಾತುಕತೆಗಳನ್ನು ಆರಂಭಿಸುವಂತೆ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಿಶ್ಚಿತ ನಿರ್ಣಯಗಳಿಲ್ಲದೇ ಕೃಷಿ ಕಾಯ್ದೆಗಳ ಕುರಿತು ಸರ್ಕಾರ ಮತ್ತು ರೈತ ಸಂಘಗಳ ಪ್ರತಿನಿಧಿಗಳ ನಡುವೆ ನಡೆದ ಒಂಬತ್ತು ಸುತ್ತಿನ ಮಾತಕತೆಗಳು ವಿಫಲಗೊಂಡಿವೆ. ಬುಧವಾರ(ಇಂದು) ಹತ್ತನೇ ಸುತ್ತಿನ ಮಾತುಕತೆಯೂ ನಿಗದಿಯಾಗಿದೆ. ಈ ಎಲ್ಲ ಬೆಳವಣಿಗೆಗಳನ್ನು ಪಕ್ಕಕ್ಕಿಟ್ಟು, ‘ಮುಂದೆ ಏನು ಮಾಡಬೇಕು, ಯಾವ ವಿಷಯಗಳನ್ನು ಕೈಬಿಡಬೇಕು‘ ಎಂಬುದನ್ನು ಇಟ್ಟುಕೊಂಡು ಹೊಸದಾಗಿ ಮಾತುಕತೆ ಆರಂಭಿಸುವಂತೆ ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ಹಳೆಯ ಚರ್ಚೆಗಳನ್ನು ಬದಿಗಿಟ್ಟು, ಹೊಸದಾಗಿ ಮಾತುಕತೆ ಆರಂಭಿಸುವುದನ್ನು ಸರ್ಕಾರ ನಿರಾಕರಿಸುವುದಾದರೆ, ಮುಂದಿನ ಚರ್ಚೆಗಳಲ್ಲಿ ಹೇಗೆ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ ಎಂದು ಚಿದಂಬರಂ ಅಚ್ಚರಿಯಿಂದ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT