ನವದೆಹಲಿ: ಕೋವಿಡ್-19 ಲಸಿಕೆ ಪೂರೈಕೆ ಬಗ್ಗೆ ಹಲವಾರು ರಾಜ್ಯಗಳ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿರುವುದರ ವಿರುದ್ಧ ಗರಂ ಆಗಿರುವ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಯಾವುದೇ ನಿರ್ದಿಷ್ಟ ರಾಜ್ಯದಲ್ಲಿ ಸಮಸ್ಯೆಗಳಿದ್ದರೆ ಆಯಾ ರಾಜ್ಯಗಳು ಹೊಣೆಯಾಗಿದ್ದು, ಲಸಿಕೆ ವಿತರಣೆಯನ್ನು ಸರಿಯಾಗಿ ಯೋಜಿಸಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹರ್ಷವರ್ಧನ್, 'ಯಾವುದೇ ರಾಜ್ಯದಲ್ಲಿ ಲಸಿಕೆ ಪೂರೈಕೆ ಸಮಸ್ಯೆಯಿದ್ದರೆ ಆಯಾ ರಾಜ್ಯಗಳ ಲೋಪವಾಗಿದೆ. ರಾಜ್ಯಗಳುಲಸಿಕೆ ಕಾರ್ಯಕ್ರಮ ಉತ್ತಮವಾಗಿ ಯೋಜಿಸುವ ಅಗತ್ಯವಿದೆ. ರಾಜ್ಯಗಳಲ್ಲಿಯೋಜನೆ ಹಾಗೂ ವಿತರಣೆಯು ಆಯಾ ರಾಜ್ಯಗಳ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.
👉If there are issues in states, it shows that they need to better plan their #vaccination drives. Intra-state planning & logistics are the responsibility of the states
— Dr Harsh Vardhan (@drharshvardhan) July 1, 2021
👉I request these leaders to desist from their shameless urge to play politics even in the midst of a pandemic
ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಇಂತಹ ರಾಜಕೀಯ ಪ್ರೌವೃತ್ತಿಯಿಂದ ಹೊರಬರುವಂತೆ ನಾಯಕರಲ್ಲಿ ಕೋರುತ್ತೇನೆ ಎಂದಿದ್ದಾರೆ.
'ಈ ವಿಷಯಗಳ ಬಗ್ಗೆ ಗೊತ್ತಾಗಿಯೂ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಾದರೆ ಅತ್ಯಂತ ದುರದೃಷ್ಟಕರ. ಅವರಿಗಿದರ ಬಗ್ಗೆ ಅರಿವಿಲ್ಲದಿದ್ದರೆ ಆಡಳಿದತ್ತ ಗಮನ ಹರಿಸಬೇಕು. ಭಯಭೀತಿ ಸೃಷ್ಟಿಸುವ ಬದಲು ಯೋಜನೆಯಲ್ಲಿ ಹೆಚ್ಚಿನ ಶ್ರಮ ವಹಿಸುವಂತೆ ನಾಯಕರನ್ನು ವಿನಂತಿ ಮಾಡುತ್ತೇನೆ' ಎಂದಿದ್ದಾರೆ.
👉If these leaders are aware of these facts and are still giving such statements, I consider it most unfortunate.
— Dr Harsh Vardhan (@drharshvardhan) July 1, 2021
If they don’t know, they need to focus on governance.
Will again request state leaders to spend more energies in planning and not in creating panic.
ಕೇಂದ್ರ ಸರ್ಕಾರವು ಕೇಂದ್ರಿಕೃತವಾಗಿ ಲಸಿಕೆ ವಿತರಣೆಯನ್ನು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯ ವೇಗ ಹೆಚ್ಚಿದೆ ಎಂದವರು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರವು ಶೇಕಡಾ 75ರಷ್ಟು ಲಸಿಕೆಗಳನ್ನು ರಾಜ್ಯಗಳಿಗೆ ಉಚಿತವಾಗಿ ನೀಡಲು ಪ್ರಾರಂಭಿಸಿದ ಬಳಿಕ ಲಸಿಕೆ ಪ್ರಕ್ರಿಯೆಯವೇಗ ಹೆಚ್ಚಿದೆ. ಜೂನ್ನಲ್ಲಿ 11.50 ಕೋಟಿ ಡೋಸ್ಗಳನ್ನುವಿತರಿಸಲಾಗಿದೆ ಎಂದು ಹೇಳಿದ್ದಾರೆ.
I'm seeing irresponsible statements from various leaders regarding #LargestVaccineDrive
— Dr Harsh Vardhan (@drharshvardhan) July 1, 2021
Stating facts below so people can judge intentions of these leaders
👉After GoI provided 75% of vaccines available for free, vaccination speed picked up & 11.50 cr doses were given in June
ಲಸಿಕೆ ಕೊರತೆ ಬಗ್ಗೆ ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್, ಜಾರ್ಖಂಡ್, ಮಹಾರಾಷ್ಟ್ರ, ತಮಿಳುನಾಡು ಹಾಗೂ ಒಡಿಶಾ ರಾಜ್ಯಗಳಿಂದ ದೂರುಗಳು ಕೇಳಿಬಂದಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.