<p class="title"><strong>ನವದೆಹಲಿ: </strong>ಜೈಲಿನಲ್ಲಿ ರಕ್ಷಣೆಗಾಗಿ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕಾಗಿ ಎಎಪಿ ಸಚಿವ ಸತ್ಯೇಂದ್ರ ಜೈನ್ಗೆ ₹60 ಕೋಟಿ ಹಣ ಪಾವತಿಸಿರುವುದಾಗಿ ಲೆಫ್ಟಿನೆಂಟ್ ಜನರಲ್ ವಿ.ಕೆ.ಸಕ್ಷೇನಾ ರಚಿಸಿರುವ ಸಮಿತಿಯ ಮುಂದೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಪುನರುಚ್ಚರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p class="title">ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ವಿರುದ್ಧ ಮಾಡಿರುವ ಆರೋಪಗಳ ತನಿಖೆ ನಡೆಸಲು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.</p>.<p>ಸಮಿತಿಯ ಸದಸ್ಯರು ಮಂಡೋಲಿ ಜೈಲಿನಲ್ಲಿ ಚಂದ್ರಶೇಖರ್ ಅವರನ್ನು ಭೇಟಿಯಾಗಿ ನವೆಂಬರ್ 14-15 ರಂದು ಹೇಳಿಕೆ ದಾಖಲಿಸಿದ್ದಾರೆ.ಸಮಿತಿಯು ಸಲ್ಲಿಸಿದ ವರದಿಯ ಪ್ರಕಾರ, ಚಂದ್ರಶೇಖರ್ ಅವರು ಸತ್ಯೇಂದ್ರ ಜೈನ್ಗೆ ₹ 60 ಕೋಟಿ ನೀಡಿದ್ದು, ಇದರಲ್ಲಿ ಎಎಪಿಯಿಂದ ರಾಜ್ಯಸಭಾ ಸ್ಥಾನ ಪಡೆಯಲು ₹ 50 ಕೋಟಿ ಮತ್ತು ಜೈಲಿನಲ್ಲಿ ರಕ್ಷಣೆಗಾಗಿ ₹ 10 ಕೋಟಿ ನೀಡಲಾಗಿದೆ.ಆಗಿನ ಮಹಾನಿರ್ದೇಶಕ (ಜೈಲು) ಸಂದೀಪ್ ಗೋಯೆಲ್ ಅವರಿಗೆ ₹12.50 ಕೋಟಿ ಪಾವತಿಸಲಾಗಿದೆ ಎಂದು ಹೇಳಲಾಗಿದೆ.</p>.<p>ಜೈನ್ ಹಾಗೂ ತನ್ನ ನಡುವೆ ನಡೆದ ಹಣದ ವಿತರಣೆ, ಸಮಯ, ಸ್ಥಳದ ಮಾಹಿತಿಗಳು ತನ್ನ ವಾಟ್ಸ್ಆ್ಯಪ್ನಲ್ಲಿ ಇವೆ. ತನಿಖಾ ಸಂಸ್ಥೆಗಳಿಗೆ ಅಗತ್ಯವಿದ್ದರೆ ಈ ಪುರಾವೆಗಳನ್ನು ಒದಗಿಸಲಾಗುವುದು.ಜೈನ್ ಅವರ ಫೋನ್ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿ ಅವರು ಪಾವತಿಸಿದ ಹಣದ ಕಂತುಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಆರೋಪಿ ಸುಕೇಶ್ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ: </strong>ಜೈಲಿನಲ್ಲಿ ರಕ್ಷಣೆಗಾಗಿ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕಾಗಿ ಎಎಪಿ ಸಚಿವ ಸತ್ಯೇಂದ್ರ ಜೈನ್ಗೆ ₹60 ಕೋಟಿ ಹಣ ಪಾವತಿಸಿರುವುದಾಗಿ ಲೆಫ್ಟಿನೆಂಟ್ ಜನರಲ್ ವಿ.ಕೆ.ಸಕ್ಷೇನಾ ರಚಿಸಿರುವ ಸಮಿತಿಯ ಮುಂದೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಪುನರುಚ್ಚರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p class="title">ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ವಿರುದ್ಧ ಮಾಡಿರುವ ಆರೋಪಗಳ ತನಿಖೆ ನಡೆಸಲು ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಗೃಹ) ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.</p>.<p>ಸಮಿತಿಯ ಸದಸ್ಯರು ಮಂಡೋಲಿ ಜೈಲಿನಲ್ಲಿ ಚಂದ್ರಶೇಖರ್ ಅವರನ್ನು ಭೇಟಿಯಾಗಿ ನವೆಂಬರ್ 14-15 ರಂದು ಹೇಳಿಕೆ ದಾಖಲಿಸಿದ್ದಾರೆ.ಸಮಿತಿಯು ಸಲ್ಲಿಸಿದ ವರದಿಯ ಪ್ರಕಾರ, ಚಂದ್ರಶೇಖರ್ ಅವರು ಸತ್ಯೇಂದ್ರ ಜೈನ್ಗೆ ₹ 60 ಕೋಟಿ ನೀಡಿದ್ದು, ಇದರಲ್ಲಿ ಎಎಪಿಯಿಂದ ರಾಜ್ಯಸಭಾ ಸ್ಥಾನ ಪಡೆಯಲು ₹ 50 ಕೋಟಿ ಮತ್ತು ಜೈಲಿನಲ್ಲಿ ರಕ್ಷಣೆಗಾಗಿ ₹ 10 ಕೋಟಿ ನೀಡಲಾಗಿದೆ.ಆಗಿನ ಮಹಾನಿರ್ದೇಶಕ (ಜೈಲು) ಸಂದೀಪ್ ಗೋಯೆಲ್ ಅವರಿಗೆ ₹12.50 ಕೋಟಿ ಪಾವತಿಸಲಾಗಿದೆ ಎಂದು ಹೇಳಲಾಗಿದೆ.</p>.<p>ಜೈನ್ ಹಾಗೂ ತನ್ನ ನಡುವೆ ನಡೆದ ಹಣದ ವಿತರಣೆ, ಸಮಯ, ಸ್ಥಳದ ಮಾಹಿತಿಗಳು ತನ್ನ ವಾಟ್ಸ್ಆ್ಯಪ್ನಲ್ಲಿ ಇವೆ. ತನಿಖಾ ಸಂಸ್ಥೆಗಳಿಗೆ ಅಗತ್ಯವಿದ್ದರೆ ಈ ಪುರಾವೆಗಳನ್ನು ಒದಗಿಸಲಾಗುವುದು.ಜೈನ್ ಅವರ ಫೋನ್ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿ ಅವರು ಪಾವತಿಸಿದ ಹಣದ ಕಂತುಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಆರೋಪಿ ಸುಕೇಶ್ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>