ನವದೆಹಲಿ: ದೆಹಲಿಯಲ್ಲಿ ಈ ವರ್ಷದ ಮಾರ್ಚ್ ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮವು 'ಹಲವರಿಗೆ' ಕೊರೊನಾ ಸೋಂಕು ಹರಡಲು ಕಾರಣವಾಯಿತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಗೃಹ ಖಾತೆ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದು, ಮಾರ್ಚ್ 29ರ ನಂತರ ದೆಹಲಿ ಪೊಲೀಸರು 233 ತಬ್ಲೀಗಿಜಮಾತ್ ಸದಸ್ಯರನ್ನು ಬಂಧಿಸಿ, 2,631 ಜನರನ್ನು ತೆರವು ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ಜಮಾತ್ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ವಿರುದ್ಧ ತನಿಖೆಯು ಪ್ರಗತಿಯಲ್ಲಿದೆ. ದೆಹಲಿ ಪೊಲೀಸರು ಹೇಳಿರುವಂತೆ, ಕೋವಿಡ್ಕುರಿತಾದ ನಿರ್ಬಂಧ ವಿಧಿಸಲಾಗಿದ್ದರೂಸಮಾವೇಶ ನಡೆಸಲಾಗಿತ್ತು. ಅಲ್ಲಿ ಪರಸ್ಪರ ಅಂತರವೂ ಸೇರಿದಂತೆ ಮುಂಜಾಗ್ರತೆ ವಹಿಸಿರಲಿಲ್ಲ. ಇದು ಹಲವರಿಗೆ ಸೋಂಕು ಹರಡಲು ಕಾರಣವಾಯಿತು ಎಂದಿದ್ದಾರೆ.