ತಂಜಾವೂರು (ಪಿಟಿಐ):ತಂಜಾವೂರು ಜಿಲ್ಲೆಯಕಳಿಮೆಡುವಿನ ಅಪ್ಪಾರ್ ದೇವಸ್ಥಾನದ ರಥಕ್ಕೆ ಬುಧವಾರ ಬೆಳಿಗ್ಗೆ ಮೆರವಣಿಗೆ ಸಂದರ್ಭದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿ ತಗುಲಿ ಮೂವರು ಹದಿಹರೆಯದ ಬಾಲಕರು ಸೇರಿದಂತೆ ಒಟ್ಟು 11 ಮಂದಿ ಭಕ್ತರು ಮೃತಪಟ್ಟಿದ್ದಾರೆ.ಈ ದುರಂತದಲ್ಲಿ ಮಹಿಳೆ ಸೇರಿ 17 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.