ಮಧುರೈ ಜಿಲ್ಲೆಯ ಟಿ.ಕುನ್ನತ್ತೂರಿನಲ್ಲಿರುವ 12 ಎಕರೆ ಪ್ರದೇಶದಲ್ಲಿ ಈ ದೇವಸ್ಥಾನವಿದ್ದು, ಕಂದಾಯ ಸಚಿವ ಆರ್.ಬಿ.ಉದಯ್ ಕುಮಾರ್ ಇದರ ನಿರ್ಮಾಣದ ಮುಂದಾಳತ್ವ ವಹಿಸಿದ್ದರು. ದೇವಸ್ಥಾನವನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ನೂರಾರು ಕಾರ್ಯಕರ್ತರು ಭೇಟಿ ನೀಡಿದ್ದರು. ಇವರನ್ನು ಉದ್ದೇಶಿಸಿ ಮಾತನಾಡಿದ ಪಳನಿಸ್ವಾಮಿ ಹಾಗೂ ಪನ್ನೀರ್ಸೆಲ್ವಂ, ಇಬ್ಬರು ನಾಯಕರೂ ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡಿದ್ದ ಯೋಜನೆಗಳನ್ನು ಶ್ಲಾಘಿಸಿದರು.