‘ಶೌಚಾಲಯದ ಟೈಲ್ಸ್ಗಳು ಒಡೆದ ಕಾರಣ, ಸಿಮೆಂಟ್ ಮೆತ್ತಿ ಅವುಗಳನ್ನು ಪುನಃ ಕೂಡಿಸಲಾಗಿತ್ತು. ಮಲ ವಿಸರ್ಜನೆ ನಂತರ ಸರಿಯಾಗಿ ಸ್ವಚ್ಛಗೊಳಿಸದೇ ಬಿಡಲಾಗಿತ್ತು. ಅಲ್ಲಿ ನಿರ್ಮಿಸಿದ್ದ ಬಂಕರ್ನಲ್ಲಿ ಉಗ್ರರು ಅಡಗಿರುವ ಬಗ್ಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು. ಆ ಶೌಚಾಲಯದ ಸುತ್ತ ಅಗೆಯಲು ಆರಂಭಿಸಿದಾಗ, ಕೆಳಗಿನಿಂದ ಬೆಂಕಿ ಕಾಣಿಸಿಕೊಂಡಿತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಅಲ್ಲಿಯೇ ಅಡಗಿದ್ದ ಲಷ್ಕರ್ ಎ ತಯಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಯಿತು’ ಎಂದೂ ದಿಲ್ಬಾಗ್ ಸಿಂಗ್ ವಿವರಿಸಿದರು.