ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಭಾರತೀಯ ಸಂಪಾದಕರ ಒಕ್ಕೂಟ, ಉನ್ನತ ಸಾಂವಿಧಾನಕ ಹುದ್ದೆಯಲ್ಲಿರುವ ಮತ್ತು ಮಾಧ್ಯಮ ಸ್ವತಂತ್ರ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ಈ ರೀತಿ ಕೆಲ ಮಾಧ್ಯಮಗಳನ್ನು ಗುರಿಯಾಗಿಸುತ್ತಿರುವುದು ತೀವ್ರ ನೋವುಂಟು ಮಾಡಿದೆ. ಅಧಿಕಾರದಲ್ಲಿ ಇರುವವರನ್ನು ಟೀಕಿಸುವ ಅಧಿಕಾರ ಮಾಧ್ಯಮಗಳಿಗೆ ಇದೆ. ಆದರೆ ಇಂಥ ಟೀಕೆಯೇ ಸುದ್ದಿಗೋಷ್ಠಿಯಿಂದ ಮಾಧ್ಯಮಗಳನ್ನು ಹೊರಗಿಡಲು ಕಾರಣವಾಗಬಾರದು ಎಂದು ತಿಳಿಸಿದೆ.