<p><strong>ಬೆಂಗಳೂರು:</strong>ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಿಂದ ಎರಡು ಸುದ್ದಿವಾಹಿನಿಗಳ ಪತ್ರಕರ್ತರನ್ನು ಹೊರಗೆ ಕಳುಹಿಸಿದ ಕ್ರಮಕ್ಕೆ ಭಾರತೀಯ ಸಂಪಾದಕರ ಒಕ್ಕೂಟದ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರ ವಿರೋಧ ವ್ಯಕ್ತಪಡಿಸಿದೆ.</p>.<p>ನವೆಂಬರ್ 7ರಂದು ಕೊಚ್ಚಿಯಲ್ಲಿ ನಿಗದಿಯಾಗಿದ್ದ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ, ‘ಕೈರಳಿ’ ಮತ್ತು ‘ಮೀಡಿಯಾ ಒನ್’ನ ಸುದ್ದಿವಾಹಿನಿಗಳ ಪತ್ರಕರ್ತರು ಸುದ್ದಿಗೋಷ್ಠಿಯಿಂದ ಹೊರ ಹೋಗಬೇಕು ಎಂದುರಾಜ್ಯಪಾಲರು ಸೂಚನೆ ನೀಡಿದ್ದರು. ಈ ಸುದ್ದಿವಾಹಿನಿಗಳ ಪತ್ರಕರ್ತರು ಹೊರನಡೆದ ನಂತರವಷ್ಟೇ ಮಾಧ್ಯಮದವರೊಂದಿಗೆ ಸಂವಾದ ಆರಂಭಿಸಿದ್ದರು.</p>.<p>ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಭಾರತೀಯ ಸಂಪಾದಕರ ಒಕ್ಕೂಟ, ಉನ್ನತ ಸಾಂವಿಧಾನಕ ಹುದ್ದೆಯಲ್ಲಿರುವ ಮತ್ತು ಮಾಧ್ಯಮ ಸ್ವತಂತ್ರ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ಈ ರೀತಿ ಕೆಲ ಮಾಧ್ಯಮಗಳನ್ನು ಗುರಿಯಾಗಿಸುತ್ತಿರುವುದು ತೀವ್ರ ನೋವುಂಟು ಮಾಡಿದೆ. ಅಧಿಕಾರದಲ್ಲಿ ಇರುವವರನ್ನು ಟೀಕಿಸುವ ಅಧಿಕಾರ ಮಾಧ್ಯಮಗಳಿಗೆ ಇದೆ. ಆದರೆ ಇಂಥ ಟೀಕೆಯೇ ಸುದ್ದಿಗೋಷ್ಠಿಯಿಂದ ಮಾಧ್ಯಮಗಳನ್ನು ಹೊರಗಿಡಲು ಕಾರಣವಾಗಬಾರದು ಎಂದು ತಿಳಿಸಿದೆ.</p>.<p>ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಪ್ರತಿಯೊಂದು ಮಾಧ್ಯಮಕ್ಕೂ ಸರ್ಕಾರದ ವ್ಯವಹಾರಗಳ ಕುರಿತ ವರದಿಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಬೇಕಾದ ಅಗತ್ಯವಿದೆ ಎಂದೂ ಒಕ್ಕೂಟ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಿಂದ ಎರಡು ಸುದ್ದಿವಾಹಿನಿಗಳ ಪತ್ರಕರ್ತರನ್ನು ಹೊರಗೆ ಕಳುಹಿಸಿದ ಕ್ರಮಕ್ಕೆ ಭಾರತೀಯ ಸಂಪಾದಕರ ಒಕ್ಕೂಟದ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರ ವಿರೋಧ ವ್ಯಕ್ತಪಡಿಸಿದೆ.</p>.<p>ನವೆಂಬರ್ 7ರಂದು ಕೊಚ್ಚಿಯಲ್ಲಿ ನಿಗದಿಯಾಗಿದ್ದ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ, ‘ಕೈರಳಿ’ ಮತ್ತು ‘ಮೀಡಿಯಾ ಒನ್’ನ ಸುದ್ದಿವಾಹಿನಿಗಳ ಪತ್ರಕರ್ತರು ಸುದ್ದಿಗೋಷ್ಠಿಯಿಂದ ಹೊರ ಹೋಗಬೇಕು ಎಂದುರಾಜ್ಯಪಾಲರು ಸೂಚನೆ ನೀಡಿದ್ದರು. ಈ ಸುದ್ದಿವಾಹಿನಿಗಳ ಪತ್ರಕರ್ತರು ಹೊರನಡೆದ ನಂತರವಷ್ಟೇ ಮಾಧ್ಯಮದವರೊಂದಿಗೆ ಸಂವಾದ ಆರಂಭಿಸಿದ್ದರು.</p>.<p>ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಭಾರತೀಯ ಸಂಪಾದಕರ ಒಕ್ಕೂಟ, ಉನ್ನತ ಸಾಂವಿಧಾನಕ ಹುದ್ದೆಯಲ್ಲಿರುವ ಮತ್ತು ಮಾಧ್ಯಮ ಸ್ವತಂತ್ರ ಸೇರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರು ಈ ರೀತಿ ಕೆಲ ಮಾಧ್ಯಮಗಳನ್ನು ಗುರಿಯಾಗಿಸುತ್ತಿರುವುದು ತೀವ್ರ ನೋವುಂಟು ಮಾಡಿದೆ. ಅಧಿಕಾರದಲ್ಲಿ ಇರುವವರನ್ನು ಟೀಕಿಸುವ ಅಧಿಕಾರ ಮಾಧ್ಯಮಗಳಿಗೆ ಇದೆ. ಆದರೆ ಇಂಥ ಟೀಕೆಯೇ ಸುದ್ದಿಗೋಷ್ಠಿಯಿಂದ ಮಾಧ್ಯಮಗಳನ್ನು ಹೊರಗಿಡಲು ಕಾರಣವಾಗಬಾರದು ಎಂದು ತಿಳಿಸಿದೆ.</p>.<p>ಮಾಧ್ಯಮ ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಪ್ರತಿಯೊಂದು ಮಾಧ್ಯಮಕ್ಕೂ ಸರ್ಕಾರದ ವ್ಯವಹಾರಗಳ ಕುರಿತ ವರದಿಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಬೇಕಾದ ಅಗತ್ಯವಿದೆ ಎಂದೂ ಒಕ್ಕೂಟ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>