ನಿಕೋಸಿಯಾ (ಪಿಟಿಐ): ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಯಾವುದೇ ಪ್ರಯತ್ನವನ್ನು ಭಾರತ ಒಪ್ಪುವುದಿಲ್ಲ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪ್ರತಿಪಾದಿಸಿದರು.
ಸೈಪ್ರಸ್ನಲ್ಲಿ ಶುಕ್ರವಾರ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಭಾರತವನ್ನು ಸಂಧಾನಕ್ಕೆ ಒತ್ತಾಯಿಸಲು ಭಯೋತ್ಪಾದನೆಯನ್ನು ಸಾಧನವಾಗಿ ಬಳಸಲಾಗುವುದಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಭಾರತವು ತನ್ನ ಗಡಿಗಳಲ್ಲಿ ಹಲವು ಸವಾಲು ಹೊಂದಿದ್ದು, ಇದು ಕೋವಿಡ್ ಅವಧಿಯಲ್ಲಿ ತೀವ್ರಗೊಂಡಿದೆ ಎಂದರು.