<p><strong>ಕೋಲ್ಕತ್ತ:</strong> ಪಕ್ಷದ ಬೆಂಬಲಿಗರು ‘ಗೋಲಿ ಮಾರೋ’ ಎಂದು ಘೋಷಣೆ ಕೂಗಿರುವುದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಂತರ ಕಾಯ್ದುಕೊಂಡಿದೆ.</p>.<p>ರ್ಯಾಲಿಯೊಂದರ ವೇಳೆ ಕೆಲವು ಟಿಎಂಸಿ ಬೆಂಬಲಿಗರು ‘ಬಂಗಾಳದ ದೇಶದ್ರೋಗಿಗಳಿಗೆ ಗುಂಡಿಕ್ಕಿ’ ಎಂದು ಘೋಷಣೆ ಕೂಗಿದ್ದರು.</p>.<p>ಕೆಲವು ಯುವ ಬೆಂಬಲಿಗರು ‘ಅತಿಯಾದ ಉತ್ಸಾಹ’ದಿಂದ ಹಾಗೆ ಘೋಷಣೆ ಕೂಗಿರಬಹುದು. ಆದರೆ, ಪಕ್ಷವು ಅದನ್ನು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/mamata-banerjee-and-suvendu-adhikari-face-off-communally-divided-nandigram-798051.html" itemprop="url">ನಂದಿಗ್ರಾಮ: ಹೋರಾಟದ ತಾಣದಲ್ಲಿ ಕೋಮು ಧ್ರುವೀಕರಣ</a></p>.<p>‘ರ್ಯಾಲಿಗಳಲ್ಲಿ ಅಂಥ ಘೋಷಣೆಗಳನ್ನು ಕೂಗಬಾರದು. ಅಂತಹ ಘೋಷಣೆ ಕೂಗಿದ್ದು ಸರಿಯಲ್ಲ. ‘ಗೋಲಿ ಮಾರೋ’ ಎಂಬುದನ್ನು ಕೇವಲ ಆ ಪದದ ಅರ್ಥವಾಗಿಯಷ್ಟೇ ಗಣನೆಗೆ ತೆಗೆದುಕೊಳ್ಳಬಾರದು’ ಎಂದೂ ಅವರು ಹೇಳಿದ್ದಾರೆ.</p>.<p>ದಕ್ಷಿಣ ಕೋಲ್ಕತ್ತದಲ್ಲಿ ಮಂಗಳವಾರ ನಡೆದ ‘ಶಾಂತಿ ರ್ಯಾಲಿ’ಯಲ್ಲಿ ಕೆಲವು ಟಿಎಂಸಿ ಬೆಂಬಲಿಗರು ಘೋಷಣೆ ಕೂಗಿದ್ದರು. ರ್ಯಾಲಿಯಲ್ಲಿ ಟಿಎಂಸಿ ಸರ್ಕಾರದ ಇಬ್ಬರು ಸಚಿವರೂ ಭಾಗವಹಿಸಿದ್ದರು.</p>.<p>2020ರ ಜನವರಿಯಲ್ಲಿ ದೆಹಲಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂಥದ್ದೇ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಘೋಷಣೆ ಕೂಗಿದ್ದು ದೇಶದಾದ್ಯಂತ ಆಕ್ಷೇಪಕ್ಕೆ ಗುರಿಯಾಗಿತ್ತು. ಇತರ ಪ್ರತಿಪಕ್ಷಗಳ ಜತೆಗೆ ಟಿಎಂಸಿಯು ಘೋಷಣೆಯನ್ನು ತೀವ್ರವಾಗಿ ಖಂಡಿಸಿತ್ತು.</p>.<p><strong>ಓದಿ:</strong><a href="https://www.prajavani.net/india-news/bjp-more-dangerous-than-maoist-says-mamata-banerjee-797763.html" itemprop="url">ಮಾವೋವಾದಿಗಳಿಗಿಂತ ಬಿಜೆಪಿ ಅಪಾಯಕಾರಿ: ಮಮತಾ ಬ್ಯಾನರ್ಜಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಪಕ್ಷದ ಬೆಂಬಲಿಗರು ‘ಗೋಲಿ ಮಾರೋ’ ಎಂದು ಘೋಷಣೆ ಕೂಗಿರುವುದರಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಂತರ ಕಾಯ್ದುಕೊಂಡಿದೆ.</p>.<p>ರ್ಯಾಲಿಯೊಂದರ ವೇಳೆ ಕೆಲವು ಟಿಎಂಸಿ ಬೆಂಬಲಿಗರು ‘ಬಂಗಾಳದ ದೇಶದ್ರೋಗಿಗಳಿಗೆ ಗುಂಡಿಕ್ಕಿ’ ಎಂದು ಘೋಷಣೆ ಕೂಗಿದ್ದರು.</p>.<p>ಕೆಲವು ಯುವ ಬೆಂಬಲಿಗರು ‘ಅತಿಯಾದ ಉತ್ಸಾಹ’ದಿಂದ ಹಾಗೆ ಘೋಷಣೆ ಕೂಗಿರಬಹುದು. ಆದರೆ, ಪಕ್ಷವು ಅದನ್ನು ಬೆಂಬಲಿಸುವುದಿಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.</p>.<p><strong>ಓದಿ:</strong><a href="https://www.prajavani.net/india-news/mamata-banerjee-and-suvendu-adhikari-face-off-communally-divided-nandigram-798051.html" itemprop="url">ನಂದಿಗ್ರಾಮ: ಹೋರಾಟದ ತಾಣದಲ್ಲಿ ಕೋಮು ಧ್ರುವೀಕರಣ</a></p>.<p>‘ರ್ಯಾಲಿಗಳಲ್ಲಿ ಅಂಥ ಘೋಷಣೆಗಳನ್ನು ಕೂಗಬಾರದು. ಅಂತಹ ಘೋಷಣೆ ಕೂಗಿದ್ದು ಸರಿಯಲ್ಲ. ‘ಗೋಲಿ ಮಾರೋ’ ಎಂಬುದನ್ನು ಕೇವಲ ಆ ಪದದ ಅರ್ಥವಾಗಿಯಷ್ಟೇ ಗಣನೆಗೆ ತೆಗೆದುಕೊಳ್ಳಬಾರದು’ ಎಂದೂ ಅವರು ಹೇಳಿದ್ದಾರೆ.</p>.<p>ದಕ್ಷಿಣ ಕೋಲ್ಕತ್ತದಲ್ಲಿ ಮಂಗಳವಾರ ನಡೆದ ‘ಶಾಂತಿ ರ್ಯಾಲಿ’ಯಲ್ಲಿ ಕೆಲವು ಟಿಎಂಸಿ ಬೆಂಬಲಿಗರು ಘೋಷಣೆ ಕೂಗಿದ್ದರು. ರ್ಯಾಲಿಯಲ್ಲಿ ಟಿಎಂಸಿ ಸರ್ಕಾರದ ಇಬ್ಬರು ಸಚಿವರೂ ಭಾಗವಹಿಸಿದ್ದರು.</p>.<p>2020ರ ಜನವರಿಯಲ್ಲಿ ದೆಹಲಿಯಲ್ಲಿ ಬಿಜೆಪಿ ನಾಯಕರೊಬ್ಬರು ಇಂಥದ್ದೇ (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಘೋಷಣೆ ಕೂಗಿದ್ದು ದೇಶದಾದ್ಯಂತ ಆಕ್ಷೇಪಕ್ಕೆ ಗುರಿಯಾಗಿತ್ತು. ಇತರ ಪ್ರತಿಪಕ್ಷಗಳ ಜತೆಗೆ ಟಿಎಂಸಿಯು ಘೋಷಣೆಯನ್ನು ತೀವ್ರವಾಗಿ ಖಂಡಿಸಿತ್ತು.</p>.<p><strong>ಓದಿ:</strong><a href="https://www.prajavani.net/india-news/bjp-more-dangerous-than-maoist-says-mamata-banerjee-797763.html" itemprop="url">ಮಾವೋವಾದಿಗಳಿಗಿಂತ ಬಿಜೆಪಿ ಅಪಾಯಕಾರಿ: ಮಮತಾ ಬ್ಯಾನರ್ಜಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>