ಜಮ್ಮು: ಇಲ್ಲಿಯ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಭಾರತೀಯ ಸೇನಾಪಡೆ ಇಬ್ಬರನ್ನು ಹತ್ಯೆಗೈದಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ಭಾನುವಾರ ತಿಳಿಸಿದರು.
ಶನಿವಾರ ಸಂಜೆ ಗಡಿಯಲ್ಲಿ ಭಯೋತ್ಪಾದಕರ ಚಲನೆ ಗಮನಿಸಿ ಸೈನಿಕರು ತಡೆದಿದ್ದಾರೆ. ಸದ್ಯ ಸ್ಥಳದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು,
ಹತ್ಯೆಯಾದ ಭಯೋತ್ಪಾದಕರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, 2 ಎಕೆ ಗನ್ಗಳು ಸೇರಿದಂತೆ ಸುಧಾರಿತ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಗುರುತು ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದರು.
ಕಳೆದ ವಾರ ರಜೌರಿಯ ಧಂಗ್ರಿ ಜಿಲ್ಲೆಯಲ್ಲಿ ಉಗ್ರರ ದಾಳಿಯಲ್ಲಿ ನಟ ಪ್ರಿನ್ಸ್ ಶರ್ಮಾ, ಅವರ ಸಹೋದರ ದೀಪಕ್ ಕುಮಾರ್ ಸೇರಿ ಏಳು ಮಂದಿ ನಾಗರಿಕರು ಸಾವನ್ನಪ್ಪಿದ್ದು 14 ಜನರು ಗಾಯಗೊಂಡಿದ್ದರು. ಈ ಘಟನೆಯಾಗಿ ಕೇವಲ ಒಂದು ವಾರದ ನಂತರ ಬಾಲಾಕೋಟ್ ಸೆಕ್ಟರ್ನಲ್ಲಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಇದಾಗಿದೆ.