ಶಿವಸೇನಾ ಪಕ್ಷದ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ವಿಡಿಯೊ ಸಂವಾದದ ಮೂಲಕ ಪಕ್ಷದ ಸಂಸದರು ಮತ್ತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಶಿವಸೇನಾ ಪಕ್ಷವು 'ಹಿಂದುತ್ವವಾದಿ' ಪಕ್ಷ ಎಂದು ಪ್ರತಿಪಾದಿಸಿದ ಅವರು, ಹಿಂದುತ್ವ ಮತ್ತಿತ್ತರೆ ವಿಚಾರಗಳ ಕುರಿತಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.