‘ಆಗ್ರಾದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ, ಮಾರ್ಚ್ 10ರ ಬಳಿಕ ‘ಬುಲ್ಡೋಜರ್’ ಕೆಲಸ ಮಾಡಲಿದೆ ಎಂದು ಹೇಳಿದ್ದರು. ಪದೇಪದೇ ಎಸ್ಪಿ ನಾಯಕರನ್ನು ಗೂಂಡಾ, ಮಾವಲಿ, ಮಾಫಿಯಾ ಎಂದು ಹೇಳುತ್ತಿದ್ದಾರೆ. ಫೆಬ್ರುವರಿ 1ರಂದು ಮೀರತ್ನ ಸೈವಾಲ್ಖಾಸ್ನಲ್ಲಿ ಹಾಗೂ ಕಿಥೋರ್ನಲ್ಲಿ ‘ಕೆಂಪು ಟೋಪಿ ಎಂದರೆ ಗಲಭೆಕೋರರು, ಅಪರಾಧ ಹಿನ್ನಲೆಯುಳ್ಳವರು’ ಎಂದು ಹೇಳಿದ್ದರು. ಕೈರಾನಾದಲ್ಲಿ ಮಾತನಾಡಿ, ಈಗ ಕಾಣಿಸುವ ಬಿಸಿ ಕರಗಲಿದೆ, ಅದನ್ನು ಹೇಗೆ ಕರಗಿಸಬೇಕು ಎಂಬುದು ಗೊತ್ತಿದೆ ಎಂದು ಹೇಳಿದ್ದರು. ಸದಾ ಬೆದರಿಕೆ ಒಡ್ಡುವಂಥ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಚೌಧರಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.