<p><strong>ನವದೆಹಲಿ</strong>: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ 2020ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.</p>.<p>ಎಂಜಿನಿಯರಿಂಗ್ ಪದವೀಧರರಾದ ಶುಭಂ ಕುಮಾರ್, ಜಾಗೃತಿ ಅವಸ್ಥಿ ಹಾಗೂ ಅಂಕಿತಾ ಜೈನ್ ಅವರು ಕ್ರಮವಾಗಿ ಮೊದಲ ಮೂರು ರ್ಯಾಂಕ್ಗಳನ್ನು ಪಡೆದಿದ್ದಾರೆ.</p>.<p>ಬಾಂಬೆ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶುಭಂ ಐಚ್ಛಿಕ ವಿಷಯವನ್ನಾಗಿ ಮಾನವಶಾಸ್ತ್ರವನ್ನೂ, ಭೋಪಾಲದ ಮೌಲಾನಾ ಆಝಾದ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಜಾಗೃತಿ, ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.</p>.<p>545 ಪುರುಷರು ಮತ್ತು 216 ಮಹಿಳೆಯರು ಸೇರಿದಂತೆ ಒಟ್ಟು 761 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ.</p>.<p>ಐಎಎಸ್, ಐಎಫ್ಎಸ್, ಐಪಿಎಸ್ ಅಧಿಕಾರಿ ಹುದ್ದೆ ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ 2020ರ ಅಕ್ಟೋಬರ್ 4ರಂದು ನಡೆದಿದ್ದ ಪ್ರಿಲಿಮ್ಸ್ ಪರೀಕ್ಷೆಯಲ್ಲಿ 4,82,770 ಅಭ್ಯರ್ಥಿಗಳು ಹಾಜರಾಗಿದ್ದರು.</p>.<p>ಇವರಲ್ಲಿ 10,564 ಅಭ್ಯರ್ಥಿಗಳು 2021ರ ಜನವರಿಯಲ್ಲಿ ನಡೆದಿದ್ದ ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಈ ಪೈಕಿ 2,053 ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನು 15 ದಿನಗಳೊಳಗೆ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ಪ್ರಕಟಣೆ ತಿಳಿಸಿದೆ.</p>.<p><strong>ರ್ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು</strong></p>.<p>ಅಕ್ಷಯ್ ಸಿಂಹ ಕೆ.ಜೆ - 77</p>.<p>ನಿಶ್ಚಯ್ ಪ್ರಸಾದ್ ಎಂ - 130</p>.<p>ಸಿರಿವೆನ್ನೆಲ–204</p>.<p>ಅನಿರುದ್ದ್ ಆರ್ ಗಂಗಾವರಂ- 252</p>.<p>ಸೂರಜ್ ಡಿ - 255</p>.<p>ನೇತ್ರಾ ಮೇಟಿ– -326</p>.<p>ಮೇಘಾ ಜೈನ್– 354</p>.<p>ಪ್ರಜ್ವಲ್– 367</p>.<p>ಸಾಗರ್ ಎ ವಾಡಿ – 385</p>.<p>ನಾಗರಗೊಜೆ ಶುಭಂ – 453</p>.<p>ಬಿಂದು ಮಣಿ ಆರ್. ಎನ್- 468</p>.<p>ಶಕೀರ್ ಅಹ್ಮದ್ ತೊಂಡಿಖಾನ್ – 583</p>.<p>ಪ್ರಮೋದ್ ಆರಾಧ್ಯ ಎಚ್. ಆರ್-601</p>.<p>ಸೌರಬ್ ಕೆ– - 725</p>.<p>ವೈಶಾಖ್ ಬಗೀ– 744</p>.<p>ಸಂತೋಶ ಎಚ್ – 751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ದ 2020ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ.</p>.<p>ಎಂಜಿನಿಯರಿಂಗ್ ಪದವೀಧರರಾದ ಶುಭಂ ಕುಮಾರ್, ಜಾಗೃತಿ ಅವಸ್ಥಿ ಹಾಗೂ ಅಂಕಿತಾ ಜೈನ್ ಅವರು ಕ್ರಮವಾಗಿ ಮೊದಲ ಮೂರು ರ್ಯಾಂಕ್ಗಳನ್ನು ಪಡೆದಿದ್ದಾರೆ.</p>.<p>ಬಾಂಬೆ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಶುಭಂ ಐಚ್ಛಿಕ ವಿಷಯವನ್ನಾಗಿ ಮಾನವಶಾಸ್ತ್ರವನ್ನೂ, ಭೋಪಾಲದ ಮೌಲಾನಾ ಆಝಾದ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಜಾಗೃತಿ, ಸಮಾಜಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು.</p>.<p>545 ಪುರುಷರು ಮತ್ತು 216 ಮಹಿಳೆಯರು ಸೇರಿದಂತೆ ಒಟ್ಟು 761 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ.</p>.<p>ಐಎಎಸ್, ಐಎಫ್ಎಸ್, ಐಪಿಎಸ್ ಅಧಿಕಾರಿ ಹುದ್ದೆ ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ 2020ರ ಅಕ್ಟೋಬರ್ 4ರಂದು ನಡೆದಿದ್ದ ಪ್ರಿಲಿಮ್ಸ್ ಪರೀಕ್ಷೆಯಲ್ಲಿ 4,82,770 ಅಭ್ಯರ್ಥಿಗಳು ಹಾಜರಾಗಿದ್ದರು.</p>.<p>ಇವರಲ್ಲಿ 10,564 ಅಭ್ಯರ್ಥಿಗಳು 2021ರ ಜನವರಿಯಲ್ಲಿ ನಡೆದಿದ್ದ ಮುಖ್ಯ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಈ ಪೈಕಿ 2,053 ಅಭ್ಯರ್ಥಿಗಳು ಮೌಖಿಕ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನು 15 ದಿನಗಳೊಳಗೆ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ಪ್ರಕಟಣೆ ತಿಳಿಸಿದೆ.</p>.<p><strong>ರ್ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು</strong></p>.<p>ಅಕ್ಷಯ್ ಸಿಂಹ ಕೆ.ಜೆ - 77</p>.<p>ನಿಶ್ಚಯ್ ಪ್ರಸಾದ್ ಎಂ - 130</p>.<p>ಸಿರಿವೆನ್ನೆಲ–204</p>.<p>ಅನಿರುದ್ದ್ ಆರ್ ಗಂಗಾವರಂ- 252</p>.<p>ಸೂರಜ್ ಡಿ - 255</p>.<p>ನೇತ್ರಾ ಮೇಟಿ– -326</p>.<p>ಮೇಘಾ ಜೈನ್– 354</p>.<p>ಪ್ರಜ್ವಲ್– 367</p>.<p>ಸಾಗರ್ ಎ ವಾಡಿ – 385</p>.<p>ನಾಗರಗೊಜೆ ಶುಭಂ – 453</p>.<p>ಬಿಂದು ಮಣಿ ಆರ್. ಎನ್- 468</p>.<p>ಶಕೀರ್ ಅಹ್ಮದ್ ತೊಂಡಿಖಾನ್ – 583</p>.<p>ಪ್ರಮೋದ್ ಆರಾಧ್ಯ ಎಚ್. ಆರ್-601</p>.<p>ಸೌರಬ್ ಕೆ– - 725</p>.<p>ವೈಶಾಖ್ ಬಗೀ– 744</p>.<p>ಸಂತೋಶ ಎಚ್ – 751</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>