ಇದರಿಂದ ಸಿಟ್ಟಿಗೆದ್ದ ಮಮತಾ ತಮ್ಮ ಆಸನಕ್ಕೆ ಹಿಂತಿರುಗುವ ಮುನ್ನ ’ಈ ಕಾರ್ಯಕ್ರಮವನ್ನು ಕೋಲ್ಕತ್ತದಲ್ಲಿ ನಡೆಸಿದ್ದಕ್ಕಾಗಿ ನಾನು ಪ್ರಧಾನಿ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ಧನ್ಯವಾದ ಹೇಳುತ್ತೇನೆ. ಇದು ಸರ್ಕಾರದ ಕಾರ್ಯಕ್ರಮ. ಯಾವುದೋ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದಕ್ಕೊಂದು ಘನತೆ ಇರಬೇಕು. ಜನರನ್ನು ಆಹ್ವಾನಿಸಿ ಅವರನ್ನು ಅಪಮಾನಿಸುವುದು ಯಾರಿಗೂ ಇಷ್ಟವಾಗುವುದಿಲ್ಲ. ನಾನು ಮಾತನಾಡುವುದಿಲ್ಲ. ಜೈ ಬಾಂಗ್ಲಾ, ಜೈ ಹಿಂದ್’ ಎಂದು ಹೇಳಿದ್ದರು.